Advertisement

ಕೈ ನೋಟು, ಬಿಜೆಪಿಗೆ ವೋಟು; ಮತದಾರರಿಗೆ ಈಶ್ವರಪ್ಪ ಕರೆ!

04:47 PM Mar 30, 2017 | Sharanya Alva |

ಮೈಸೂರು: ಕಾಂಗ್ರೆಸ್ ಮುಖಂಡರು ಸಿಕ್ಕಿದ್ರೆ ದುಡ್ಡು ಕೇಳಿ ಇಸ್ಕೊಳ್ಳಿ, ಆದ್ರೆ ನಿಮ್ಮ ವೋಟನ್ನು ಮಾತ್ರ ಬಿಜೆಪಿಗೆ ಹಾಕಿ…ಇದು ಬಿಜೆಪಿ ಮುಖಂಡ, ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಗುಂಡ್ಲುಪೇಟೆಯಲ್ಲಿ ನೀಡಿದ ಹೇಳಿಕೆ.

Advertisement

ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಭಾಷಣಕ್ಕೆ ತೆರಳಿದ್ದ ಈಶ್ವರಪ್ಪನವರು, ಇಲ್ಲಿನ ಚಿಕ್ಕಾಟಿಯಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಒಂದು ವೋಟಿಗೆ 4 ಸಾವಿರ ರೂಪಾಯಿ ಕೊಡುತ್ತಾರಂತೆ. ಹಾಗಾಗಿ ಮತದಾರರು ಕೈ ನಾಯಕರು ಕೊಟ್ಟ ದುಡ್ಡು ಇಸ್ಕೊಂಡು, ಬಿಜೆಪಿಗೆ ಮತ ಹಾಕಬೇಕು ಎಂದು ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next