Advertisement

ತಾಜ್‌: ನ.15ರ ಗಡುವು

06:00 AM Sep 27, 2018 | Team Udayavani |

ಹೊಸದಿಲ್ಲಿ: ಐತಿಹಾಸಿಕ ಸ್ಮಾರಕ ತಾಜ್‌ಮಹಲ್‌ ರಕ್ಷಣೆಗೆ ಸಂಬಂಧಿಸಿ ದಿಕ್ಸೂಚಿ ದಾಖಲೆಯನ್ನು ಸಲ್ಲಿಸಲು ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನ.15ರ ಗಡುವು ನೀಡಿದೆ. ಸಂಪೂರ್ಣ ಆಗ್ರಾ ನಗರವನ್ನು ಪಾರಂಪರಿಕ ನಗರವೆಂದು ಘೋಷಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಸರಕಾರ ಹೇಳಿತ್ತು. ಅದಕ್ಕೆ ತಾಜ್‌ ಮಹಲ್‌ನ ಸುತ್ತಲಿನ ಪ್ರದೇಶವನ್ನು ಪಾರಂಪರಿಕ ಸ್ಥಳ ಎಂದು ಘೋಷಿಸಲು ಸುಪ್ರೀಂ ಹೇಳಿತ್ತು. ಈ ಕುರಿತು ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಸರಕಾರ‌, ಈ ಕೆಲಸದಲ್ಲಿ ಗುಜರಾತ್‌ ಮೂಲದ ಸೆಂಟರ್‌ ಫಾರ್‌ ಎನ್ವಿರಾನ್‌ಮೆಂಟ್‌ ಆ್ಯಂಡ್‌ ಟೆಕ್ನಾಲಜಿಯ ಸಹಾಯ ಪಡೆಯುತ್ತಿರುವುದಾಗಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next