Advertisement

High Court ಒತ್ತುವರಿ ತೆರವಿಗೆ ತಹಶೀಲ್ದಾರ್‌ ಆದೇಶ: ಕೋರ್ಟ್‌ನಿಂದ ತಡೆ

12:09 AM Oct 21, 2023 | Team Udayavani |

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಶಾರದಾನಗರದಲ್ಲಿ ಹಿಂದೂ ರುದ್ರಭೂಮಿಗಾಗಿ ಸರಕಾರದಿಂದ ಮಂಜೂರಾದ 50 ಸೆಂಟ್ಸ್‌ ಜಮೀನನ್ನು ಒತ್ತುವರಿ ಮಾಡಲಾಗಿದ್ದರೂ ಅದರ ತೆರವಿಗೆ ಬಂಟ್ವಾಳ ತಹಶೀಲ್ದಾರರು ನೀಡಿದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Advertisement

ಶಾರದಾನಗರ ನಿವಾಸಿ ಸುಂದರ ಪೂಜಾರಿ ಅವರು ಹಿಂದೂ ರುದ್ರಭೂಮಿಗಾಗಿ ಮಂಜೂರಾದ ಜಮೀನನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆಂದು ಆರೋಪ ಕೇಳಿಬಂದಿತ್ತು. ಹೀಗಾಗಿ ದೂರಿನ ಆಧಾರದಲ್ಲಿ ತಹಶೀಲ್ದಾರ್‌ ಅವರು ಒತ್ತುವರಿ ತೆರವಿಗೆ ಸುಂದರ ಪೂಜಾರಿಯವರಿಗೆ ನೋಟಿಸ್‌ ಜಾರಿಯ ಜತೆಗೆ ಆದೇಶವನ್ನೂ ಮಾಡಿದ್ದರು.

ಈ ಆದೇಶವನ್ನು ಪ್ರಶ್ನಿಸಿ ಸುಂದರ ಪೂಜಾರಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಪ್ರಸ್ತುತ ತಹಶೀಲ್ದಾರ್‌ ಆದೇಶಕ್ಕೆ ತಡೆ ನೀಡಲಾಗಿದೆ. ಸುಂದರ ಪೂಜಾರಿಯವರ ಪರವಾಗಿ ನ್ಯಾಯವಾದಿ ರೋಹಿತ್‌ ಗೌಡ ಅವರು ವಾದಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next