Advertisement

Rice: ಪಡಿತರ ಅಕ್ಕಿ ದಾಸ್ತಾನಿನಲ್ಲಿ ಅವ್ಯವಹಾರ ದೂರು: ತಹಶೀಲ್ದಾರ್‌ ತನಿಖೆ

12:05 AM Aug 18, 2023 | Team Udayavani |

ಬಂಟ್ವಾಳ: ಬಿ.ಸಿ.ರೋಡು ಗೋದಾಮಿನಲ್ಲಿರುವ ಪಡಿತರ ಅಕ್ಕಿಯ ದಾಸ್ತಾನಿನ ಅವ್ಯವಹಾರದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಹಶೀಲ್ದಾರ್‌ ತಂಡ ಗುರುವಾರ ಪರಿಶೀಲನೆ ನಡೆಸಿದ್ದು, ದಾಸ್ತಾನಿನಲ್ಲಿ ವ್ಯಾತ್ಯಾಸವಿರುವುದು ಕಂಡುಬಂದಿದೆ. ನಾಪತ್ತೆಯಾಗಿರುವ ಅಕ್ಕಿಯ ಪ್ರಮಾಣದ ಕುರಿತು ತನಿಖೆ ನಡೆಯುತ್ತಿದೆ.

Advertisement

ಅಕ್ಕಿ ದಾಸ್ತಾನಿನ ಅವ್ಯವಹಾರದ ಕುರಿತು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರಿಗೆ ಸಾರ್ವ ಜನಿಕರಿಂದ ಬಂದ ದೂರಿನಿಂದ ದ.ಕ.ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತನಿಖೆ ನಡೆಸುವಂತೆ ತಿಳಿಸಿದ್ದರು. ಡಿಸಿಯವರು ತನಿಖೆ ನಡೆಸುವಂತೆ ಬಂಟ್ವಾಳ ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿ ಅವರಿಗೆ ಆದೇಶಿಸಿದ್ದರು.

ತಹಶೀಲ್ದಾರರಿಂದ ಪೂರ್ಣ ಮಾಹಿತಿ ಬರಬೇಕಿರುವುದರಿಂದ ಸ್ಪಷ್ಟ ಮಾಹಿತಿ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಇಲಾಖೆ ದ.ಕ. ಜಿಲ್ಲಾ ಉಪನಿರ್ದೇಶಕಿ ಡಾ| ಹೇಮಲತಾ ಬಿ.ಎಸ್‌. ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next