Advertisement

ಉತ್ತರ ಪ್ರದೇಶ ಘಟನೆಗೆ ತೀವ್ರ ಖಂಡನೆ-ತಹಶೀಲ್ದಾರ್‌ಗೆ ಮನವಿ

03:30 PM Jun 16, 2022 | Team Udayavani |

ಮಾನ್ವಿ: ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಂಧಿಸಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವೆಲ್ಫೆಧೀರ್‌ ಪಾರ್ಟಿ ಜಿಲ್ಲಾಧ್ಯಕ್ಷ ಫರೀದ್‌ ಉಮರಿ ಒತ್ತಾಯಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ವೆಲ್ಫೆಧೀರ್‌ ಪಾರ್ಟಿ ಆಫ್‌ ಇಂಡಿಯಾ ವತಿಯಿಂದ ಉಪ ತಹಶೀಲ್ದಾರ್‌ ವಿರುಪಣ್ಣರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಒಂದು ಪಕ್ಷದ ವಕ್ತಾರರು ಮತ್ತು ಮಾಧ್ಯಮ ಮುಖ್ಯಸ್ಥರು ಧರ್ಮನಿಂದನೆ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ನಂತರವೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವೆಲ್ಫೆಧೀರ್‌ ಪಾರ್ಟಿ ರಾಷ್ಟ್ರೀಯ ನಾಯಕರ ಮೇಲಿನ ದಾಳಿ ಬಗ್ಗೆ ತನಿಖೆ ನಡೆಸಿ ಜಾವೇದ್‌ ಮೊಹಮ್ಮದ್‌ ಮತ್ತು ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಶೇಕ್‌ ಬಾಬಾ ಹುಸೇನ್‌, ನಾಸೀರ್‌ ಅಲಿ, ಮುಖಂಡರಾದ ಸಯ್ಯದ್‌ ಯೂಸುಫ್‌ ಸಾಹೇಬ್‌, ಮೊಹಮ್ಮದ್‌ ಇಸಾಕ್‌, ಮಹಬೂಬ್‌ ಫ್ರೂಟ್‌, ಶಫುìದ್ದೀನ್‌, ದುಬೈ ರಾಜು, ಹನುಮಂತಪ್ಪ, ಬಾಗಲಕೊಟ ರಫಿ, ಇಬ್ರಾಹಿಂ ಸಾಬ್‌, ಅಬ್ದುಲ್‌ ಹಮೀದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next