Advertisement

ಪೌಷ್ಟಿಕಾಂಶ ಮೇಲ್ವಿಚಾರಣೆಗೆ ಟ್ಯಾಬ್ಲೆಟ್‌

12:57 PM Aug 05, 2018 | |

ಹೊಸದಿಲ್ಲಿ: ದೇಶದಲ್ಲಿನ ಎಂಟು ರಾಜ್ಯಗಳು ಅಂಗನವಾಡಿಯಲ್ಲಿ ಮಕ್ಕಳ ಪೌಷ್ಟಿಕಾಂಶ  ಮೇಲ್ವಿಚಾರಣೆ ಮಾಡುವುದಕ್ಕಾಗಿ 2 ಲಕ್ಷ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳನ್ನು ಖರೀದಿಸಿವೆ. ಪೋಷಣ ಅಭಿಯಾನ್‌ ಅಡಿಯಲ್ಲಿ ಈ ಖರೀದಿ ಮಾಡಲಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ  ಕೊರತೆ, ಅನಿಮಿಯಾ ಹಾಗೂ ಕಡಿಮೆ ತೂಕ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಪೋಷಣ ಅಭಿಯಾನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

Advertisement

ಈ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಇರುವ ಅಪ್ಲಿಕೇಶನ್‌ನಲ್ಲಿ ಮಾಹಿತಿ ಭರ್ತಿ ಮಾಡಲಾಗುತ್ತದೆ. ಈ ಮೂಲಕ ಪ್ರತಿ ಗ್ರಾಮದ ಪೌಷ್ಠಿಕಾಂಶದ ಪ್ರೊಫೈಲ್‌ ಅನ್ನು ಪಡೆಯಲಾಗುತ್ತದೆ. ಪ್ರತಿ ಗ್ರಾಮದ ವರದಿಯೂ ಈ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುತ್ತದೆ.  ದೇಶಾದ್ಯಂತ ಎಲ್ಲ ಅಂಗನವಾಡಿಗಳಿಗೆ ಒಟ್ಟು 11 ಲಕ್ಷ ಸ್ಮಾರ್ಟ್‌ಫೋನ್‌ಗಳು ಅಗತ್ಯವಿವೆ. ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್‌,  ಮಧ್ಯಪ್ರದೇಶ, ಪುದುಶೆÏàರಿ, ರಾಜಸ್ಥಾನ, ಉತ್ತರ ಪ್ರದೇಶ, ಕೇಂದ್ರಾಡಳಿತ ಪ್ರದೇಶವಾಗಿರುವ ದಾದ್ರಾ ಮತ್ತು ನಗರ್‌ ಹವೇಲಿಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ.

ಎಲ್ಲ ಕಡೆಯೂ ಇಂಟರ್‌ನೆಟ್‌ ಸೌಲಭ್ಯ ಇಲ್ಲದ್ದರಿಂದ, ಇದು ಆಫ್ಲೈನ್‌ನಲ್ಲೂ ಕಾರ್ಯನಿರ್ವಹಿಸುತ್ತದೆ. ಇಂಟರ್‌ನೆಟ್‌ ಸೌಲಭ್ಯ ಕಡಿಮೆ ಇರುವಲ್ಲಿಯೂ ಈ ಅಪ್ಲಿಕೇಶನ್‌ ಬಳಸಿ ಮಾಹಿತಿ ಭರ್ತಿ ಮಾಡಬಹುದಾಗಿದೆ. ಅಂಗನವಾಡಿ ಯಲ್ಲಿ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಕರಿಗೆ ಹಸ್ತಾಂತರಿಸಲಾಗುತ್ತದೆ. ಅವರು ಅದನ್ನು ಡೇಟಾಬೇಸ್‌ ಸರ್ವರ್‌ಗೆ ಭರ್ತಿ ಮಾಡುತ್ತಾರೆ. ದತ್ತಾಂಶವನ್ನು ಸಚಿವಾ ಲಯದ ಮಟ್ಟವೂ ಸೇರಿದಂತೆ ಸಂಬಂಧಿತರು ನೋಡಬಹುದಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next