Advertisement

T20 World Cup; ಭಾರತ- ಇಂಗ್ಲೆಂಡ್ ಸೆಮಿ ಪಂದ್ಯಕ್ಕೆ ಭಾರಿ ಮಳೆ ಅಡ್ಡಿ ಸಾಧ್ಯತೆ

11:07 AM Jun 26, 2024 | Team Udayavani |

ಟರೂಬ/ಪ್ರೊವಿಡೆನ್ಸ್‌: ಟಿ20 ವಿಶ್ವಕಪ್‌ ಪಂದ್ಯಾವಳಿ ಸೆಮಿಫೈನಲ್‌ನತ್ತ ಮುಖ ಮಾಡಿದ್ದು ಅಂತಿಮಘಟ್ಟದ ನಿರ್ಣಾಯಕ ಪಂದ್ಯಗಳಿಗೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ನಡುವೆ ಮೊದಲ ಸೆಮಿಫೈನಲ್ ಗುರುವಾರ(ಜೂನ್ 27) ಟ್ರಿನಿಡಾಡ್‌ನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಗುರುವಾರ ರಾತ್ರಿ ರಾತ್ರಿ 8 ರಿಂದ ಗಯಾನಾದಲ್ಲಿ ಆರಂಭವಾಗಲಿದೆ. ಎರಡೂ ಪಂದ್ಯಗಳಿಗೂ ಮಳೆ ಭೀತಿ ಎದುರಾಗಿದೆ. ಗಯಾನಾದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ 88% ಇದೆ.

Advertisement

ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ಹೊಂದಿದ್ದರೂ, ಎರಡನೇ ಸೆಮಿಫೈನಲ್ ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನವಿಲ್ಲ. ಪಂದ್ಯವನ್ನು ಅದೇ ದಿನ ಪೂರ್ಣಗೊಳಿಸಬೇಕಾಗುತ್ತದೆ ಏಕೆಂದರೆ ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯ ಶನಿವಾರ ನಡೆಯುತ್ತಿದೆ. ಕೆರಿಬಿಯನ್ ದ್ವೀಪಗಳ ನಡುವಿನ ಪ್ರಯಾಣದ ಯೋಜನೆಗಳನ್ನು ಸರಿಹೊಂದಿಸಲು ಪಂದ್ಯಗಳ ನಡುವೆ 24-ಗಂಟೆಗಳ ಅಂತರವಿರುತ್ತದೆ. ಮಳೆಯು ಆಟಕ್ಕೆ ಅಡ್ಡಿಪಡಿಸಿದರೆ ಫಲಿತಾಂಶ ಪಡೆಯಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ.

ಒಂದು ವೇಳೆ ಸೆಮಿ-ಫೈನಲ್‌ನಿಂದ ಹೊರಗುಳಿದಿದ್ದಲ್ಲಿ ಅಥವಾ ಹವಾಮಾನವು 10-ಓವರ್‌ಗಳ ಆಟಕ್ಕೂ ಅವಕಾಶ ನೀಡದಿದ್ದಲ್ಲಿ ಯಾವುದೇ ಫಲಿತಾಂಶವಿಲ್ಲ ಸಾಧ್ಯವಾಗದಿದ್ದರೆ, ಐಸಿಸಿ ಆಟದ ಪರಿಸ್ಥಿತಿಗಳಿಗನುಗುಣವಾಗಿ ಸೂಪರ್ ಎಂಟರಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದ ತಂಡವು ಫೈನಲ್ ತಲುಪುತ್ತದೆ. ಒಂದು ವೇಳೆ ಹೀಗಾದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನೇರವಾಗಿ ಫೈನಲ್ ಪ್ರವೇಶಿಸುತ್ತದೆ. ಜೂನ್ 29 ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಬಾರ್ಬಡೋಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಅದೃಷ್ಟವಶಾತ್ ಫೈನಲ್ ಪಂದ್ಯ ಮೀಸಲು ದಿನವನ್ನು ಹೊಂದಿದೆ. ಆ ಪಂದ್ಯವೂ ಪೂರ್ಣಗೊಳ್ಳದಿದ್ದರೆ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಹಿಂದೊಮ್ಮೆ ಜಂಟಿ ವಿಜೇತನ್ನಾಗಿ ಘೋಷಿಸಲಾಗಿತ್ತು

Advertisement

2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ದಿನಗಳ ಕಾಲ 50 ಓವರ್‌ಗಳ ಫೈನಲ್‌ನಲ್ಲಿ ಆಡಿದ್ದವು. ಎರಡೂ ದಿನ ಸಂಜೆಯ ವೇಳೆಗೆ ಮಳೆ ಬೀಳುವ ಮುನ್ಸೂಚನೆ ನೀಡಲಾಗಿತ್ತು.

ಕೊಲಂಬೊದಲ್ಲಿ ನಡೆದ ಫೈನಲ್‌ನ ಮೊದಲ ದಿನ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 244-5 ರನ್ ಗಳಿಸಿತು. ಮಳೆ ಅಡ್ಡಿಪಡಿಸುವ ಮೊದಲು ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿತ್ತು. ಭಾರಿ ಮಳೆ ಸುರಿದ ಕಾರಣ ಮರುದಿನ ಹೊಸ ಪಂದ್ಯ ನಡೆಯಿತು. ಆತಿಥೇಯರು ಮತ್ತೆ ಮೊದಲು ಬ್ಯಾಟ್ ಮಾಡಿ 222ಕ್ಕೆ 7 ಸ್ಕೋರ್ ಮಾಡಿದರು. ಭಾರತ ತಂಡ 38 ಕ್ಕೆ 1ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು, ಮತ್ತೆ ಸುರಿದ ಮಳೆಯು ಆಟವನ್ನು ನಿಲ್ಲಿಸಿತು. ಈ ವೇಳೆ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next