Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ದೇವದತ್‌ ಪಡಿಕಲ್‌ ಅಬ್ಬರ : ಕರ್ನಾಟಕಕ್ಕೆ 10 ರನ್‌ ಜಯ

11:35 PM Jan 14, 2021 | Team Udayavani |

ಬೆಂಗಳೂರು : ದೇವದತ್‌ ಪಡಿಕಲ್‌ (ಅಜೇಯ 99) ಆಕರ್ಷಕ ಅರ್ಧಶತಕ ಮತ್ತು ಬೌಲರ್‌ಗಳ ಸಂಘಟಿತ ಹೋರಾಟದ ಫ‌ಲವಾಗಿ ಕರ್ನಾಟಕ ತಂಡ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದೆ. ಗುರುವಾರ ಆಲೂರಿನ ಮೂರನೇ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ 10 ರನ್‌ಗಳಿಂದ ತ್ರಿಪುರ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಲೀಗ್‌ನಲ್ಲಿ ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ 2 ಜಯ ಹಾಗೂ ಒಂದು ಸೋಲು ಕಂಡ ಹಾಲಿ ಚಾಂಪಿಯನ್‌ ಕರ್ನಾಟಕ ಎಲೈಟ್‌ ಎ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ.

Advertisement

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ ನಿಗದಿತ 20 ಒವರ್‌ಗಳಲ್ಲಿ 5 ವಿಕೆಟಿಗೆ 167ರನ್‌ ಕಲೆಹಾಕಿತು. ಗುರಿ ಬೆನ್ನತ್ತಿದ ತ್ರಿಪರಕ್ಕೆ ನಾಯಕ ಮಣಿಶಂಕರ್‌ ಮುರಾಸಿಂಗ್‌ (ಅಜೇಯ 61), ರಜತ್‌ ಡೇ (ಅಜೇಯ 44) ಜೋಡಿಯ ಪ್ರತಿಹೋರಾಟದ ನಡುವೆಯೂ 4 ವಿಕೆಟಿಗೆ 157ರನ್‌ ಗಳಿಸಲಷ್ಟೆ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 5 ವಿಕೆಟಿಗೆ 167 (ಪಡಿಕಲ್‌ ಅಜೇಯ 99, ರೋಹನ್‌ ಕದಂ 31, ರಾಣಾ ದತ್ತಾ 41ಕ್ಕೆ 2, ಮಣಿಶಂಕರ್‌ 27ಕ್ಕೆ 1), ತ್ರಿಪುರ 4 ವಿಕೆಟಿಗೆ 157 (ಮಣಿಶಂಕರ್‌ ಅಜೇಯ 61, ರಜತ್‌ ಡೇ ಅಜೇಯ 44, ಪ್ರವಿಣ್‌ ದುಬೆ 20ಕ್ಕೆ 1, ಕೆ. ಗೌತಮ್‌ 26ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next