Advertisement

ಕೋಲ್ಕತದಲ್ಲಿ ಸಿಡ್ನಿಯಿಂದ ಬಂದ ವಿಮಾನ ತುರ್ತು ಲ್ಯಾಂಡಿಂಗ್

03:45 PM Aug 25, 2022 | Team Udayavani |

ಕೋಲ್ಕತ: ಸಿಡ್ನಿಯಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವನ್ನು 50 ವರ್ಷದ ಪ್ರಯಾಣಿಕರೊಬ್ಬರು ಉಸಿರಾಟದ ತೊಂದರೆ ಕುರಿತು ಹೇಳಿಕೊಂಡ ನಂತರ ಬುಧವಾರ ಕೋಲ್ಕತದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

159 ಪ್ರಯಾಣಿಕರಿದ್ದ ವಿಮಾನವು ರಾಷ್ಟ್ರ ರಾಜಧಾನಿಗೆ ಹೊರಡುವ ಮೊದಲು ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ಸಂಜೆ 4.50 ರಿಂದ 6.50 ರವರೆಗೆ ಇತ್ತು. ಆರೋಗ್ಯ ಸಮಸ್ಯೆ ಕಂಡು ಬಂದ ಪ್ರಯಾಣಿಕರನ್ನು ಕೋಲ್ಕತದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next