Advertisement

ಸ್ವರಾಷ್ಟ್ರ ಸೂರ್ಯಶಿವಾಜಿ ಶೀರ್ಷಿಕೆ ಅನಾವರಣ

11:51 AM Dec 26, 2017 | Team Udayavani |

ಕೆ.ಗಣೇಶರಾವ್‌ ಕೇಸರಕರ್‌ ಅವರ ಪ್ರಧಾನ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಸ್ವರಾಷ್ಟ್ರ ಸೂರ್ಯಶಿವಾಜಿ’ ಎಂಬ ಚಿತ್ರ ಆರಂಭವಾಗುತ್ತಿದೆ. ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಚಾಮರಾಜ ಪೇಟೆಯ ಅಂಬಾಭವಾನಿ ದೇವಸ್ಥಾನದಲ್ಲಿ ನಡೆಯಿತು.

Advertisement

ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಟೈಟಲ್‌ ಲಾಂಚ್‌ ಮಾಡಿದರು. ಈ ಚಿತ್ರದ ಕಥೆ, ಚಿತ್ರಕಥೆಯನ್ನು ಬರೆದು ಕೋಲಾರ ನಾಗೇಶ್‌ ಅವರು ಚಿತ್ರಕ್ಕೆ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಮುತ್ತುರಾಜ್‌, ಚವ್ಹಾಣ್‌ ಈ ಚಿತ್ರದ ಛಾಯಾಗ್ರಾಹಕರಾಗಿದ್ದು, ದಾನೇಶ್‌ ಅಂಗಡಿ ಮತ್ತು ಕೆ.ನಾಗೇಶ್‌ ಸಾಹಿತ್ಯ ರಚಿಸಿದ್ದಾರೆ. ಜನವರಿ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಬೆಂಗಳೂರು, ಮೈಸೂರು, ಚಿತ್ರದುರ್ಗ, ಬೆಳಗಾಮ್‌, ಬಿಜಾಪುರ, ಶಿವನೇರು ದುರ್ಗ ಮೊದಲಾದ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್‌ ನಡೆಯಲಿದೆ. ಚಿತ್ರದಲ್ಲಿ ಬಾಲ ಶಿವಾಜಿಯಾಗಿ ಮಾ.ಯಶ್‌ರಾಜ್‌, ಮಧ್ಯಮ ಶಿವಾಜಿಯಾಗಿ ಪ್ರಜ್ವಲ್‌ ಕೇಸರಕರ್‌ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನ ಪಾತ್ರದ ಆಯ್ಕೆ ನಡೆಯುತ್ತಿದೆ. ರೇಖಾ ಗಣೇಶ್‌ ಈ ಚಿತ್ರದ ನಿರ್ಮಾಪಕಿ.

Advertisement

Udayavani is now on Telegram. Click here to join our channel and stay updated with the latest news.

Next