Advertisement

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

08:42 AM Sep 26, 2023 | Team Udayavani |

ಹೆಬ್ರಿ: ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಹೆಬ್ರಿ ತಾಲೂಕಿನ ಮುಳ್ಳುಗುಡ್ಧೆ
ಕೊರಗಜ್ಜದ ದೈವದ ಅಭಯದಂತೆ ಸೆ.24ರಂದು ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ ಘಟನೆ ನಡೆದಿದೆ.

Advertisement

ಮುಚ್ಚಟ್ಟು ಗ್ರಾಮದ ತೊಂಬಟ್ಟು ಇಕಿ೯ಗದ್ದೆ ನಿವಾಸಿ ವಿವೇಕಾನಂದ ಎಂಬ ಯುವಕ ಸೆ.16ರಂದು ಮನೆಯಿಂದ ನಾಪತ್ತೆಯಾಗಿದ್ದ.ಮನೆಯವರು ಹುಡುಕಾಡಿ ಸಿಗದ ಬಳಿಕ ಮುಳ್ಳುಗುಡ್ಡೆ ಕೊರಗಜ್ಜ ಸನ್ನಿಧಾನಕ್ಕೆ ಬಂದು ಪ್ರಾಥ೯ನೆ ಸಲ್ಲಿಸಿದರು. ಹಂದಿಯೊಂದನ್ನು ಓಡಿಸಿಕೊಂಡು ಹೋಗಿ ದಾರಿ ತಪ್ಪಿದ್ದಾನೆ.ಹಕ್ಕಿಯೊಂದು ದಾರಿ ತೋರಿಸಿದೆ.ಹಳದಿ ಬಣ್ಣದ ಅಂಗಿ ಹಾಕಿ ಕಾಡಿನಲ್ಲಿ ಅಡಗಿ ಕುಳಿತ್ತಿದ್ದಾನೆ.5 ಜನ ಸೇರಿ ಅಲ್ಲಿ ಹೋಗಿ ಹುಡುಕಿ. ಆಗಲಿಲ್ಲವಾದರೆ ಇನ್ನು ಎರಡು ದಿನದ ಒಳಗೆ ಆತ ಮನೆಗೆ ಬರುತ್ತಾನೆ ಎಂದು ಕ್ಷೇತ್ರದ ಧಮ೯ದಶಿ೯ ಪುನೀತ್ ಅವರು ಹೇಳಿದ್ದರು.

ಅದರಂತೆ ಆತನ ಜತೆಯಲ್ಲಿ ಹೋದ ನಾಯಿಯೊಂದಿಗೆ ವಾಪಾಸು ಆಗಿದ್ದಾನೆ.ಅಲ್ಲದೆ 8 ದಿನಗಳ ಕಾಲ ಕೇವಲ ನೀರಿನಿಂದ ಬದುಕಿ ಉಳಿದಿರುವುದು ಅಜ್ಜನ ಪವಾಡ ಎಂದು ಮನೆಯವರು ಹೇಳುತ್ತಾರೆ.ಮನೆಗೆ ಬಂದೊಡನೆ ಮುಳ್ಳು ಗುಡ್ಡೆ ಕ್ಷೇತ್ರಕ್ಕೆ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮನೆಮಂದಿ ಬಂದು ಪ್ರಾರ್ಥನೆ ಸಲ್ಲಿಸಿದರು. ಚಿಕ್ಕಂದಿನಿಂದಲೂ ಅನಾರೋಗ್ಯದಿಂದ ಇದ್ದ ವಿವೇಕಾನಂದನ ಚಿಕಿತ್ಸೆ ಸುಮಾರು 25ಲಕ್ಷ ಖಚು೯ ಮಾಡಿದ್ದರು. ಮತ್ತೆ ಆತ ಪತ್ತೆಯಾಗಿದ್ದರಿಂದ ಚಿಂತೆಯಲ್ಲಿದ್ದ ತಂದೆ ಮತ್ತೆ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next