Advertisement

ಸುಜ್ಲಾನ್‌ ಸಿಎಸ್‌ಆರ್‌: ಹಾಲಿನ ಕ್ಯಾನ್‌, ಮ್ಯಾಟ್‌ ವಿತರಣೆ

04:31 PM Feb 28, 2017 | Team Udayavani |

ಪಡುಬಿದ್ರಿ: ಸುಜ್ಲಾನ್‌ ಫೌಂಡೇಶನ್‌ ತನ್ನ ಸಿ ಎಸ ಆರ್‌ ಕಾರ್ಯಕ್ರಮದ ಮೂಲಕ ಪಾದೆಬೆಟ್ಟು ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಉಚಿತ  ಹಾಲಿನ ಕ್ಯಾನ್‌ ಮತ್ತು  ಮ್ಯಾಟ್‌  ವಿತರಣೆಯನ್ನು  ಪಾದೆಬೆಟ್ಟು  ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಇತ್ತೀಚಿಗೆ ಗೈಯಲಾಯಿತು.

Advertisement

ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಹೆ„ನುಗಾರಿಕೆಗೆ ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಬಂದಿದ್ದು ಗೋತಳಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ ವೆಂದು ತಿಳಿಸಿದರು. 
ಜಿ.ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ , ತಾ. ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌ , ಪಡುಬಿದ್ರಿ ಲಯನ್‌ಸ ಅಧ್ಯಕ್ಷೆ ಸುಧಾ ಆರ್‌. ನಾವಡ ಹಾಗೂ ಪಾದೆಬೆಟ್ಟು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. 

ಪಾದೆಬೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಂದೇಶ್‌ ಶೆಟ್ಟಿ, ರಾಘವೇಂದ್ರ ನಾವಡ  ಹಾಗೂ ಗ್ರಾ. ಪಂ. ಸದಸ್ಯೆ ಲತಾ ಮುಂತಾದವರು ಉಪಸ್ಥಿತರಿದ್ದರು. 

ಸುಜ್ಲಾನ್‌ ಫೌಂಡೇಶನ್‌ನ  ಸಿಎಸ್‌ಆರ್‌ ಅಧಿಕಾರಿ ಪ್ರಸಾದ್‌ ಕುಮಾರ್‌ ಸ್ವಾಗತಿಸಿ ಪ್ರಸ್ತಾವನೆಗೆ„ದರು. ಸತೀಶ್‌ ಮಾಬೆನ್‌  ಕಾರ್ಯಕ್ರಮ ನಿರ್ವಹಿಸಿದರು.

ಲಯನೆಸ್‌Õ ಕಾರ್ಯದರ್ಶಿ ಅನುರಾಧಾ ಜೆ.ಪಿ. ವಂದನಾರ್ಪಣೆ ಗೈದರು. 
ಸುಮಾರು 40  ಮಂದಿ ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್‌ ಮತ್ತು ಮ್ಯಾಟ್‌ಗಳನ್ನು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next