Advertisement

ಅನುಮಾನಸ್ಪದ ವರ್ತನೆ: ಯುವಕ ಪೊಲೀಸ್‌ ವಶಕ್ಕೆ

09:20 PM Apr 21, 2023 | Team Udayavani |

ಮಂಗಳೂರು: ರಾತ್ರಿ ವೇಳೆ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಮಂಗಳೂರು ಉತ್ತರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಗುರುವಾರ ರಾತ್ರಿ 1 ಗಂಟೆಯ ವೇಳೆಗೆ ಉತ್ತರ ಠಾಣಾ ಪೊಲೀಸರು ನಗರದ ಕೆ.ಎಸ್‌. ರಾವ್‌ ರಸ್ತೆಯ ಸಿಟಿ ಸೆಂಟರ್‌ ಬಳಿ ರೌಂಡ್ಸ್‌ನಲ್ಲಿದ್ದಾಗ ಕಸಬಾ ಬೆಂಗ್ರೆಯ ನೌಶಾದ್‌ (30) ಎಂಬಾತ ಪೊಲೀಸ್‌ ವಾಹನವನ್ನು ಕಂಡು ಕತ್ತಲಿನಲ್ಲಿ ಓಡಲು ಪ್ರಯತ್ನಿಸಿದ. ಆತ ಅಂಗಡಿ ಕಳ್ಳತನ ಅಥವಾ ಬೇರೆ ಯಾವುದೋ ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಬಲವಾದ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next