Advertisement

ಕೊಳವೆ ಬಾವಿ ದುರಂತ ತಪ್ಪಿಸಲು ಅಧ್ಯಾದೇಶ: ಎಚ್‌.ಕೆ. ಪಾಟೀಲ್‌

03:45 AM Apr 28, 2017 | Team Udayavani |

ಬೆಂಗಳೂರು: ಕೊಳವೆ ಬಾವಿ ದುರಂತ ತಪ್ಪಿಸುವ ಉದ್ದೇಶ ದಿಂದ ತೆರೆದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಅದಕ್ಕೆ ಕೊಳವೆ ಬಾವಿ ಕೊರೆಯುವ ಸಂಸ್ಥೆಗಳು ಮತ್ತು ಕೊಳವೆ ಬಾವಿ ಕೊರೆಸುವ ಮಾಲಕರನ್ನೇ ಹೊಣೆಗಾರರನ್ನಾಗಿ ಮಾಡಿ ಅಧ್ಯಾದೇಶ ಹೊರಡಿಸಲು ಸರಕಾರ ನಿರ್ಧರಿಸಿದೆ.

Advertisement

ಈ ನಿಟ್ಟಿನಲ್ಲಿ ಕಾಯ್ದೆ ತಿದ್ದುಪಡಿಗೆ ಸರಕಾರ ಮುಂದಾಗಿದೆ. ಆದರೆ, ಅದಕ್ಕೆ ವಿಧಾನ ಮಂಡಲದ ಅನು ಮೋದನೆ ಬೇಕಾಗಿರುವುದರಿಂದ ವಿಳಂಬವಾಗುತ್ತದೆ. ಹೀಗಾಗಿ ತತ್‌ಕ್ಷಣದಿಂದಲೇ ಕ್ರಮ ಕೈಗೊಳ್ಳುವ ಉದ್ದೇಶದಿಂದ ಅಧ್ಯಾದೇಶ ಹೊರ ಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸರಕಾರಿ ಮತ್ತು ಖಾಸಗಿ ಸ್ವಾಮ್ಯದ ತೆರೆದ ಕೊಳವೆ ಬಾವಿಗಳು ಮತ್ತು ಇನ್ನಿತರ ನಿರುಪಯುಕ್ತ ಗುಂಡಿಗಳಿದ್ದರೆ ಅದನ್ನು ತತ್‌ಕ್ಷಣ ಮುಚ್ಚುವಂತೆ  ಎಲ್ಲ ಜಿಲ್ಲಾ, ತಾಲೂಕು ಮತ್ತು ಗ್ರಾ. ಪಂ.ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next