Advertisement

ಉಗ್ರರ ನೇಮಕ ಒಪ್ಪಿಕೊಂಡ ಶಂಕಿತರು

12:30 AM Mar 06, 2019 | |

ಲಕ್ನೋ: ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್ಪುರದ ದೇವ್‌ಬಂದ್‌ನಲ್ಲಿ ಬಂಧಿತರಾದ ಇಬ್ಬರು ಜೈಶ್‌ ಉಗ್ರರು, ತಾವು ಉಗ್ರ ಸಂಘಟನೆಗೆ ಯುವಕರನ್ನು ನೇಮಕ ಮಾಡಿ ಕೊಳ್ಳುತ್ತಿದ್ದುದು ನಿಜ ಎಂದು ಒಪ್ಪಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ಮಂಗಳವಾರ ಮಾಹಿತಿ ನೀಡಿದೆ. ಕಾಶ್ಮೀರದ ಶಹನವಾಜ್‌ ತೇಲಿ, ಆಖೀಬ್‌ ಅಹ್ಮದ್‌ ಮಲಿಕ್‌  ಸತ್ಯ ಬಾಯಿ ಬಿಟ್ಟಿದ್ದಾರೆ. ಜೈಶ್‌ ಹಾಗೂ ಹಿಜ್ಬುಲ್‌ ಸಂಘಟನೆ ಜತೆಗಿದ್ದ ನಂಟಿನ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಚಾಟ್‌ನಲ್ಲಿ  ಹಲವು ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next