Advertisement

ಬಂಧಿತ ಐಸಿಸ್ ಉಗ್ರನಿಂದ 15 ಕೆಜಿ ಸ್ಫೋಟಕ, ಐಇಡಿ ವಶಕ್ಕೆ: ದೆಹಲಿಯಲ್ಲಿ ತಪ್ಪಿದ ಭಾರೀ ದುರಂತ

12:38 PM Aug 22, 2020 | Nagendra Trasi |

ನವದೆಹಲಿ: ರಾಜಧಾನಿ ರಿಂಗ್ ರಸ್ತೆ ಸಮೀಪ ದೀರ್ಘಕಾಲ ಗುಂಡಿನ ಚಕಮಕಿ ನಡೆದ ನಂತರ ದೆಹಲಿ ಸ್ಪೆಷಲ್ ಸೆಲ್ ಪೊಲೀಸರು ಐಸಿಸ್ ಉಗ್ರಗಾಮಿ ಸಂಘಟನೆಯ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ಐಇಡಿ, ಶಸ್ತ್ರಾಸ್ತ್ರ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಒಂಟಿಯಾಗಿ ದಾಳಿ ನಡೆಸುವ ಸಂಚು ರೂಪಿಸಿರುವುದಾಗಿ ವರದಿ ತಿಳಿಸಿದೆ.

Advertisement

ಶುಕ್ರವಾರ ತಡರಾತ್ರಿ 11-30ರ ಹೊತ್ತಿಗೆ ಅಬು ಯೂಸುಫ್ ನನ್ನು ಕುಆನ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.  ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಅಡಗಿಸಿಟ್ಟಿದ್ದ ಎರಡು ಪ್ರೆಶರ್ ಕುಕ್ಕರ್ಸ್ ಸಿಕ್ಕಿದ್ದವು. ಈ ಐಇಡಿಯಲ್ಲಿ ಬರೋಬ್ಬರಿ 15 ಕೆಜಿಯಷ್ಟು ಸ್ಫೋಟಕ ಇತ್ತು. ಅಲ್ಲದೇ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

15 ಕೆಜಿ ಸ್ಫೋಟಕ ಹಾಗೂ ಪಿಸ್ತೂಲ್ ಸಹಿತ ಐಸಿಸ್ ಉಗ್ರನನ್ನು ಸೆರೆ ಹಿಡಿಯುವ ಮೂಲಕ ದೆಹಲಿ ಸ್ಪೆಷಲ್ ಪೊಲೀಸ್ ತಂಡ ಭಾರೀ ದೊಡ್ಡ ಅನಾಹುತವನ್ನು ತಡೆದಂತಾಗಿದೆ. ಮುಂಬೈ ಮಾದರಿಯಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿರುವುದಾಗಿ ವರದಿ ವಿಶ್ಲೇಷಿಸಿದೆ.

ಇದನ್ನೂ ಓದಿ: ಗುಂಡಿನ ಚಕಮಕಿ ಬಳಿಕ ದೆಹಲಿಯಲ್ಲಿ ಐಇಡಿ, ಗನ್ ಸಹಿತ ಐಸಿಸ್ ಉಗ್ರನ ಬಂಧನ

ದೆಹಲಿಯಲ್ಲಿ ಸೆರೆಸಿಕ್ಕ ಇಸ್ಲಾಮಿಕ್ ಸ್ಟೇಟ್ ಟೆರರಿಸ್ಟ್ ಯೂಸೂಫ್ ಗೆ ಪ್ರಮುಖ ಗಣ್ಯರ ಮೇಲಿನ ದಾಳಿ ಮುಖ್ಯ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಬೂ ಯೂಸೂಫ್ ದೆಹಲಿಯಲ್ಲಿರುವ ಕೆಲವು ಸಹವರ್ತಿಗಳ ಜತೆ ಕಾರ್ಯನಿರ್ವಹಿಸುತ್ತಿದ್ದ. ಇದೀಗ ಪೊಲೀಸರು ಈತನ ಸಹಚರರ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು.

Advertisement

ಅಬು ಯೂಸೂಫ್ ಉತ್ತರಪ್ರದೇಶದ ಬಲರಾಮ್ ಪುರ್ ನಿವಾಸಿ, ಅಲ್ಲಿಯೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.

ಈತ ದೆಹಲಿಯ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚನ್ನು ಯೂಸೂಫ್ ಹೊಂದಿದ್ದು, ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ವಿವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next