Advertisement

ಹುಡುಗಿಗೆ ಮೆಸೇಜ್‌ ಮಾಡಿದ ಗುಮಾನಿ; ಹಳೆ ಸ್ನೇಹಿತರಿಂದಲೇ ಮಾಜಿ ಗೆಳೆಯನ ಮೇಲೆ ಹಲ್ಲೆ

01:22 AM Oct 26, 2024 | Team Udayavani |

ಪಡುಬಿದ್ರಿ: ಸುರತ್ಕಲ್‌ನ ಹುಡುಗಿಗೆ ಮೆಸೇಜ್‌ ಮಾಡಿದ ಗುಮಾನಿಯೊಂದಿಗೆ ಹಳೆಯ ಸ್ನೇಹಿತರಾಗಿದ್ದು, ಒಂದೂವರೆ ವರ್ಷಗಳಿಂದ ಮಾತುಕತೆ ಇರದ ಗೆಳೆಯರೇ ಉಚ್ಚಿಲದ ಮಹಮ್ಮದ್‌ ವಾಸಿಮ್‌ (23) ಅವರಿಗೆ ಅ. 23ರಂದು ಉಚ್ಚಿಲ ಪೇಟೆಯಲ್ಲಿ ಅವರ ಕೆನ್ನೆಗೆ, ಎದೆಗೆ ಕೈಯಿಂದ ಹೊಡೆದು ಗಾಯಗೊಳಿಸಿದ ಪ್ರಕರಣ ಅ. 24ರಂದು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ಮೊದಲಿಗೆ ಆರೋಪಿ ಪವನ್‌ ಮಸೇಜ್‌ ಮಾಡಿದ ಕುರಿತಾಗಿ ಮಹಮ್ಮದ್‌ ವಾಸೀಮ್‌ ಹಾಗೂ ಅವರ ತಮ್ಮ ತಾಹೀಬ್‌ಗ ಮೊಬೈಲ್‌ ಮೂಲಕ ಅವಾಚ್ಯವಾಗಿ ಬೈದಿದ್ದ. ಬಳಿಕ ಇನ್ನೋರ್ವ ಆರೋಪಿ ಇಸ್ಮಾಯಿಲ್‌, ವಾಸೀಮ್‌ ಅವರನ್ನು ಉಚ್ಚಿಲ ಬಸ್‌ ನಿಲ್ದಾಣದ ಬಳಿ ಬಾ. ಸರಿ ಮಾಡೋಣ ಎಂದು ಹೇಳಿದ್ದ. ಬಳಿಕ ಆರೋಪಿಗಳಾದ ಗಗನ್‌, ಇಸ್ಮಾಯಿಲ್‌, ಪವನ್‌, ರಜಾನ್‌, ಸಫìರಾಜ್‌, ಮಹೇಶ್‌ ಹಾಗೂ ಅರ್ವಾಜ್‌ ಅವರು ಮೂರು ಕಾರುಗಳಲ್ಲಿ ಅ. 23ರ ರಾತ್ರಿ ಉಚ್ಚಿಲಕ್ಕೆ ಬಂದಿದ್ದು, ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಮಹಮ್ಮದ್‌ ವಾಸೀಮ್‌ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next