Advertisement

ಮೊಬೈಲ್‌ ಕದ್ದ ಶಂಕೆ: 19ರ ಹರೆಯದ ಯುವಕನ ಹತ್ಯೆ

11:51 AM Nov 21, 2018 | |

ಮುಂಬಯಿ: ವಿಕ್ರೋಲಿ ಪಶ್ಚಿಮದ ಸೂರ್ಯ ನಗರದಲ್ಲಿ ಯುವಕನೋರ್ವನನ್ನು ಮೊಬೈಲ್‌ ಕದ್ದಿದ್ದಾನೆಂಬ ಶಂಕೆಯಲ್ಲಿ ನಾಲ್ವರು ವ್ಯಕ್ತಿಗಳು ಥಳಿಸಿ ಕೊಂದ ಘಟನೆ ಸಂಭವಿಸಿದೆ.

Advertisement

ಮೃತ ಯುವಕನನ್ನು 19ರ ಹರೆಯದ ರಾಹುಲ್‌ ಪಂಚಾಲ್‌ ಎಂದು ಗುರುತಿಸಲಾಗಿದೆ. ಘಟನೆ ರವಿವಾರ ಸಂಜೆ ಸಂಭವಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಮೂವರು ಅಣ್ಣ-ತಮ್ಮಂದಿರಾಗಿದ್ದಾರೆ.

ಮೊಬೈಲ್‌ ಕದ್ದಿರಲಿಲ್ಲ  ಕುಟುಂಬದವರ ಹೇಳಿಕೆ
ಪಂಚಾಲ್‌ ಮೊಬೈಲ್‌ ಫೋನ್‌ ಕದ್ದಿರಲಿಲ್ಲ. ಆರೋಪಿಗಳು ಸ್ಥಳೀಯ ಗೂಂಡಾಗಳಾಗಿದ್ದು ಪಂಚಾಲ್‌ನನ್ನು ಯಾವಾಗಲೂ ಸತಾಯಿಸುತ್ತಿದ್ದರೆಂದು ಆತನ ಕುಟುಂಬ ಸದಸ್ಯರು ಹೇಳಿದ್ದಾರೆ.  ಆರೋಪಿಗಳನ್ನು ಸುರೇಶ್‌ ವರ್ಮ, ಸುರೇಂದ್ರ ವರ್ಮ, ಶಿವಕುಮಾರ್‌ ವರ್ಮ ಮತ್ತು ಮೋನು ಪಾಂಡೆ ಎಂದು ಗುರುತಿಸಲಾಗಿದೆ.

2 ವಾರಗಳ ಹಿಂದೆ ಕಳವು
ಸುರೇಶ್‌ನ ಮೊಬೈಲ್‌ ಫೋನನ್ನು ಎರಡು ವಾರಗಳ ಹಿಂದೆ ಆತನ ಮನೆಯಿಂದ ಕದಿಯಲಾಗಿತ್ತು. ಅದು ಪಂಚಾಲ್‌ನ ಕೃತ್ಯವೆಂದು ಆತ ಶಂಕಿಸಿದ್ದ. ರವಿವಾರ ಸಂಜೆ ಪಂಚಾಲ್‌ ತನ್ನ ಮನೆಯಂದ ಹೊರಬಂದ ವೇಳೆ ಆರೋಪಿಗಳು ಆತನಿಗೆ ಹೊಡೆದು ಹಾಗೂ ತುಳಿದು ಹಲ್ಲೆ ನಡೆಸಿದರು. ತೀವ್ರ ಹಲ್ಲೆಯಿಂದಾಗಿ ಆತ ಕುಸಿದುಬಿದ್ದ. ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next