Advertisement

ಕೊಲೆ ಪ್ರಕರಣ: ಜಾಮೀನಿಗೆ ಅರ್ಜಿ ಸಲ್ಲಿಸಿದ ಸುಶೀಲ್‌ ಕುಮಾರ್‌

11:52 AM Oct 05, 2021 | Team Udayavani |

ನವದೆಹಲಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ವಿಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್‌, ಜಾಮೀನಿಗಾಗಿ ಮನವಿ ಸಲ್ಲಿಸಿದ್ದಾರೆ.

Advertisement

ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ ಮನವಿ ಮಾಡಿರುವ ಸುಶೀಲ್‌, ಉದಯೋನ್ಮುಖ ಕುಸ್ತಿಪಟು ಸಾಗರ್‌ ಧಂಕರ್‌ ಮರಣವನ್ನಿಪ್ಪಿರುವುದು ದುರದೃಷ್ಟಕರ. ಆದರೆ ಈ ಪ್ರಕರಣವನ್ನು ಅತಿಯಾಗಿ ವಿಜೃಂಭಿಸಲಾಗಿದೆ, ತನ್ನನ್ನು ಬಲಿ ಪಶುವಾಗಿಸಲು ಇದನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಅವರ ಮನವಿಯನ್ನು ದೂರುದಾರ ಸೋನು ವಿರೋಧಿಸಿದ್ದಾರೆ.

ಸುಶೀಲ್‌ರನ್ನು ಜಾಮೀನಿನ ಮೇಲೆ ಹೊರತರ  ಬಾರದು. ಈ ಕೊಲೆ ಪ್ರಕರಣದಲ್ಲಿ ಹಲವು ಕಿಡಿಗೇಡಿಗಳು ಇನ್ನೂ ಬಂಧನಕ್ಕೊಳಗಾಗಿಲ್ಲ. ಒಂದು ವೇಳೆ ಸುಶೀಲ್‌ ಹೊರಹೋದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಾದಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಇಂದು ಗೋಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ: ದಿನೇಶ್ ಗುಂಡೂರಾವ್

ಈ ವರ್ಷ ಮೇನಲ್ಲಿ ಸುಶೀಲ್‌ ಮತ್ತವರ ಸಂಗಡಿಗರು; ದೆಹಲಿಯ ಛತ್ರಸಾಲ ಮೈದಾನದಲ್ಲಿ ಸಾಗರ್‌ ಧಂಕರ್‌ ಮೇಲೆ ಮಾಡಿ ಅವರ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಸುಶೀಲ್‌ ಕುಮಾರ್‌ ಜೈಲು ಪಾಲಾಗಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next