Advertisement

ಯಾರೀಕೆ ಸುಶಾಂತ್ ಸಖಿ ರಿಯಾ ಚಕ್ರವರ್ತಿ ; ಏನಿದು ಪ್ರಕರಣ: ಇಲ್ಲಿದೆ ಫುಲ್ ಡಿಟೇಲ್ಸ್

08:00 AM Jul 29, 2020 | Karthik A |

ಮಣಿಪಾಲ: ಬಾಲಿವುಡ್‌ನ‌ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.

Advertisement

ಮಂಗಳವಾರದ ಹೊಸ ಬೆಳವಣಿಗೆಯಲ್ಲಿ ಸುಶಾಂತ್‌ ಸಿಂಗ್‌ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರ ವಿರುದ್ಧ ಸುಶಾಂತ್‌ ತಂದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ಅವರ ತಂದೆ ಕೆ.ಕೆ.ಸಿಂಗ್‌ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ಪಾಟ್ನಾದ ರಾಜೀವ್‌ ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ.

ಎಫ್ಐಆರ್‌ನಲ್ಲಿ ಏನಿದೆ?
ರಿಯಾ ಸುಶಾಂತ್‌ ಅವರಿಂದ  ಸಾಲ ರೂಪದಲ್ಲಿ ಹಣವನ್ನು ತೆಗೆದುಕೊಂಡಿದ್ದಾರೆ. ಇದನ್ನು ನೀಡದೇ ರಿಯಾ ಬ್ಲ್ಯಾಕ್‌ಮೇಲ್‌ ಮಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾಗಿ ಅವರು ಆರೋಪಿಸಿದ್ದಾರೆ. ಜೂನ್‌ 14ರಂದು ನಟ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಶಾಂತ್‌ ಮತ್ತು ರಿಯಾ ಸ್ವಲ್ಪ ಸಮಯದ ವರೆಗೆ ಡೇಟಿಂಗ್‌ ಮಾಡಿದ್ದು ಸುದ್ದಿಯಾಗಿತ್ತು.

ಐಪಿಸಿಯ ಸೆಕ್ಷನ್‌ 341, 342, 380, 406,420, 306ರಲ್ಲಿ ಪ್ರಕರಣ ದಾಖಲಿಸಲಾಗಿದೆ. ರಿಯಾ ತನ್ನ ಸ್ನೇಹಿತ ಸುಶಾಂತ್‌ಗೆ ದ್ರೋಹ ಬಗೆದಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾನೆ. ಜೂನ್‌ನಲ್ಲಿ ಸುಶಾಂತ್‌ ನೇಣಿಗೆ ಶರಣಾದ ಬಳಿಕ ಸುಶಾಂತ್‌ ಅವರ ತಂದೆ ಮುಂಬಯಿ ಪೊಲೀಸರಲ್ಲಿ ದೂರು ದಾಖಲಿಸಲಿಲ್ಲ. ಯಾರ ವಿರುದ್ಧವೂ ತಮಗೆ ಅನುಮಾನ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮಹೇಶ್‌ ಭಟ್‌ ಅವರ ವಿಚಾರಣೆ ನಡೆದ ಮರುದಿನ ಈ ಬೆಳವಣಿಗೆ ನಡೆದಿದೆ. ಕರಣ್‌ ಜೋಹರ್‌ ಅವರೂ ವಿಚಾರಣೆಯನ್ನು ಎದುರಿಸಲಿದ್ದು, ಈ ವಾರದ ಕೊನೆಯಲ್ಲಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

Advertisement

ಮಹೇಶ್‌ ಭಟ್‌ ವಿಚಾರಣೆ
ಸೋಮವಾರಷ್ಟೇ ನಿರ್ದೇಶಕ ಮಹೇಶ್‌ ಭಟ್‌ ಮುಂಬಯಿ ಪೊಲೀಸರ ಎದುರು ಹಾಜರಾಗಿದ್ದು, ಶುಶಾಂತ್‌ ಅವರ ಸಾವಿನ ಕುರಿತಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸುಶಾಂತ್‌ ಸಿಂಗ್‌ ಅವರ ಸಾವಿನಲ್ಲಿ ಮಹೇಶ್‌ ಭಟ್‌ ಅವರ ಕಾಣದ ಕೈಗಳು ಕೆಲಸ ಮಾಡಿದೆ ಎಂಬ ಆರೋಪಗಳು ಸುಶಾಂತ್‌ ಆತ್ಮಹತ್ಯೆ ಬಳಿಕ ಬಾಲಿವುಡ್‌ನ‌ಲ್ಲಿ ಹರಿದಾಡುತ್ತಿತ್ತು. ಆದರೆ ಸುಶಾಂತ್‌ ಸಾವಿಗೂ, ರಿಯಾ ಚಕ್ರಬೊರ್ತಿ ಮತ್ತು ಮಹೇಶ್‌ ಭಟ್‌ಗೆ ಏನು ಸಂಬಂಧ ಎಂಬ ಪ್ರಶ್ನೆ ಉದ್ಬವಾಗಿದೆ. ಹಾಗಾದರೆ ಯಾರಿದು ರಿಯಾ ಚಕ್ರಬೊರ್ತಿ?

ರಿಯಾ ಚಕ್ರಬೊರ್ತಿ ಸುಶಾಂತ್‌ ಸಿಂಗ್‌ ಅವರ ಮಾಜಿ ಪ್ರೇಯಸಿ. ಸುಶಾಂತ್‌ ಅವರ ಮಾಜಿ ಪ್ರೇಯಸಿ ಹಾಗೂ ಮಹೇಶ್‌ ಭಟ್‌ ನಡುವೆ ಇದ್ದ ಸಂಬಂಧ ಈ ಬೆಳವಣಿಗೆಗೆ ಕಾರಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಹೇಶ್‌ ಭಟ್‌ ಮತ್ತು ರಿಯಾ ಚಕ್ರಬೊರ್ತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತುಂಬಾ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್‌ ಆಗಿವೆ. ಇದು ಈ ಪ್ರಕರಣಕ್ಕೆ ತುಪ್ಪ ಸುರಿದಂತಾಗಿದೆ.

ಭಟ್‌ ಮೇಲೆ ಬ್ರೇಕ್‌ ಅಪ್‌ ಆರೋಪ
ಹಾಗೆ ನೋಡಿದರೆ ಸುಶಾಂತ್‌ ಅವರು ಹಾಗೂ ರಿಯಾ ಚೆನ್ನಾಗಿ ಇದ್ದರು. ಇಬ್ಬರು ಜತೆಯಾಗಿಯೇ ವಾಸಿಸುತ್ತಿದ್ದರು. ಸುಶಾಂತ್‌ ಸಾಯುವ ಕೆಲವು ದಿನಗಳ ಮುಂಚೆಯಷ್ಟೇ ಜಗಳವಾಡಿಕೊಂಡು ಮನೆಬಿಟ್ಟಿದ್ದರು. ಇಲ್ಲಿ ಇವರಿಬ್ಬರು ಜಗಳವಾಡಿ ಲವ್‌ ಮುರಿದು ಬಿಳಲು ಮಹೇಶ್‌ ಭಟ್‌ನ ಕೈವಾಡ ಇತ್ತ ಎಂಬ ಹೇಳಿಕೆಗಳು ಬಲವಾಗಿ ಕೇಳಿ ಬರುತ್ತಿದೆ. ಒಂದರ್ಥದಲ್ಲಿ ನೋಡಿದರೆ ಮಹೇಶ್‌ ಭಟ್‌ ಸದಾ ವಿವಾದದಲ್ಲಿ ಸುದ್ದಿಯಾಗುತ್ತಿರುವ ನಿರ್ದೇಶಕ. ಇವರ ಆಣತಿಯಂತೆ ರಿಯಾ ನಡೆದುಕೊಳ್ಳುತ್ತಿದ್ದರು ಎಂಬ ಮಾತುಗಳು ಬಾಲಿವುಡ್‌ ಪಡಸಾಲೆಯಲ್ಲಿ ಹಲವು ಬಾರಿ ಅನುರಣಿಸಿದ್ದೂ ಇದೆ. ಅಂದು ಈ ಕುರಿತು ತಿಳಿದುಕೊಳ್ಳುವ ಆಸಕ್ತಿ ಯಾರಿಗೂ ಅಗತ್ಯವೆನಿಸಿರಲಿಲ್ಲ. ಯಾಕೆಂದರೆ ಬಾಲಿವುಡ್‌ನ‌ಲ್ಲಿ ಗಾಸಿಪ್ಪ್‌ಗಳಿಗೇನೂ ಬರವಿಲ್ಲ.

ಆದರೆ ಯಾವಾಗ ಸುಶಾಂತ್‌ ಹಾಗೂ ರಿಯಾ ನಡುವಿನ ಸಂಬಂಧ ಹಳಿತಪ್ಪಿತೋ ಅದಕ್ಕೆ ಮಹೇಶ್‌ ಭಟ್‌ ನೇರ ಕಾರಣ ಎಂಬ ಆರೋಪಗಳು ಬಲವಾಯಿತು. ಅದಕ್ಕೆ ಪುಷ್ಠಿ ನೀಡುವಂತಹ ಸಲಿಗೆ ರಿಯಾ ಹಾಗೂ ಮಹೇಶ್‌ ಭಟ್‌ ನಡುವೆ ಇತ್ತು. ಈ ಕುರಿತಾದ ಗೋಜಲು ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಮಹೇಶ್‌ ಭಟ್‌ ಮುಂಬಯಿ ಪೊಲೀಸರ ಎದುರು ಹಾಜರಾಗಿದ್ದರು. ಸೋಮವಾರ ಹೇಳಿಕೆ ದಾಖಲಿಸಿರುವ ಕೆಲವು ಮಾಹಿತಿಗಳು ಹೊರಬಿದ್ದಿವೆ. ಸುಶಾಂತ್‌ ಅವರನ್ನು 2018-2019ರ ಅವಧಿಯಲ್ಲಿ ಕೇವಲ ಎರಡೇ ಬಾರಿ ಭೇಟಿ ಮಾಡಿರುವುದಾಗಿ ಮಹೇಶ್‌ ಭಟ್‌ ಹೇಳಿದ್ದಾರೆ. ರಿಯಾ ಚಕ್ರಬೊರ್ತಿಯನ್ನು ಜಲೇಬಿ ಚಿತ್ರಕ್ಕೆ ಹಾಕಿಕೊಂಡ ಬಳಿಕ ಸುಶಾಂತನ್ನು ಭೇಟಿಯಾಗಿದ್ದೆ ಎಂದಿದ್ದಾರೆ.

ಮಹೇಶ್‌-ರಿಯಾ ಸಂಬಂಧ!
ಮಹೇಶ್‌ ಭಟ್‌ ನಿರ್ದೇಶಿಸಿದ್ದ “ಜಲೇಬಿ’ ಚಿತ್ರದಲ್ಲಿ ಅವಕಾಶ ನೀಡಿದ್ದಾಗಿನಿಂದ ರಿಯಾ ಅವರೊಂದಿಗಿನ ಸಂಬಂದ ಉತ್ತಮವಾಗಿದೆ. ಆ ಸಿನಿಮಾದ ಕಾರಣದಿಂದಾಗಿ ರಿಯಾ ಜತೆ ಉತ್ತಮ ಬಾಂಧವ್ಯ ನಿರ್ಮಾಣವಾಗಿತ್ತು ಎಂದು ಮಹೇಶ್‌ ಭಟ್‌ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next