Advertisement

ನರ್ಮ್ ಬಸ್‌ ಸಂಚಾರಕ್ಕೆ ಸಮೀಕ್ಷೆ

08:32 AM Jul 21, 2020 | mahesh |

ಉಡುಪಿ: ನರ್ಮ್ ಬಸ್‌ ಸಂಚಾರ ಆರಂಭಿಸಲು ಸಮೀಕ್ಷೆ ನಡೆಸುವಂತೆ ಅಧಿಕಾರಿ ಗಳಿಗೆ ಸೂಚಿಸಿರುವುದಾಗಿ ಡಿಸಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಬೇರೆ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ನಿಲ್ಲಬಾರದೆಂಬ ಕಾರಣಕ್ಕೆ ಜಿಲ್ಲೆಯ ಗಡಿಗಳನ್ನು 14 ದಿನ ಬಂದ್‌ ಮಾಡಲಾಗಿದೆ. ಈಗ ದಿನವೂ ನೂರಕ್ಕೂ ಹೆಚ್ಚು ಮತ್ತು ಸಾಕಷ್ಟು ಸ್ಥಳೀಯ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಿದ್ದೇವೆ. ಜು. 27ರ ಬಳಿಕ ಯಾವುದೇ ಬಸ್‌ಗಳಲ್ಲಿ 30ಕ್ಕಿಂತ ಹೆಚ್ಚು ಜನರನ್ನು ಕರೆದೊಯ್ದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next