Advertisement

ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಕಣ್ಗಾವಲು ಆದೇಶ

12:30 AM Mar 02, 2019 | |

ತನಿಖಾ ಸಂಸ್ಥೆಗಳು ನಾಗರಿಕರ ಮೇಲೆ ಕಣ್ಗಾವಲಿಡಲು ಅನುವು ಮಾಡಿಕೊಡುವ ಆದೇಶವನ್ನು ಉಗ್ರ ಚಟುವಟಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಭದ್ರತಾ ಉದ್ದೇಶಕ್ಕಾಗಿ ಹೊರಡಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ಮಾಹಿತಿ ನೀಡಿದೆ. ಈ ಆದೇಶವು ಸಾರ್ವಜನಿಕರ ಗೌಪ್ಯತೆಗೆ ಯಾವುದೇ ಧಕ್ಕೆ ಉಂಟು ಮಾಡುವುದಿಲ್ಲ ಎಂದೂ ಸರಕಾರ ತಿಳಿಸಿದೆ. 2018 ಡಿಸೆಂಬರ್‌ 20 ರಂದು ಕೇಂದ್ರ ಸರಕಾರ ಹೊರಡಿಸಿದ ಆದೇಶಕ್ಕೆ ತಡೆ ನೀಡುವಂತೆ ಸಲ್ಲಿಸಲಾದ ಹಲಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಳ್ಳಿಹಾಕುವಂತೆ ಕೇಂದ್ರ ಸರಕಾರ ವಿನಂತಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸ್ವೀಕರಿಸಿದ ಸುಪ್ರೀಂಕೋರ್ಟ್‌ ಜನವರಿ 14 ರಂದು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್‌ ನೀಡಿತ್ತು.

Advertisement

ಭಯೋತ್ಪಾದನೆ, ಗಡಿಯಾಚೆಗಿನ ಅಪಾಯ, ಸೈಬರ್‌ ಅಪರಾಧ, ಸಾಮಾನ್ಯ ಅಪರಾಧ, ಮಾದಕ ದ್ರವ್ಯ ಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂಥವುಗಳಿಂದ ಉಂಟಾಗುವ ಅಪಾಯ ದೇಶದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಬಹುದಾಗಿರುತ್ತವೆ ಎಂದು ಕೇಂದ್ರ ಸರಕಾರ ಪ್ರಸ್ತಾಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next