Advertisement

ವೈಚಾರಿಕ ಕ್ರಾಂತಿಯ ಶರಣ ಚೌಡಯ್ಯ

08:54 AM Jan 23, 2019 | Team Udayavani |

ಔರಾದ: ಸಮಾಜ ಅಭಿವೃದ್ಧಿ ಹಾಗೂ ವೈಚಾರಿಕ ಕ್ರಾಂತಿಗೆ ಶ್ರಮಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಮಾಣಿಕ ನೆಳಗೆ ಹೇಳಿದರು.

Advertisement

ಪಟ್ಟಣ ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಮಾಜಕ್ಕೆ ಅಂಟಿಕೊಂಡ ಕಂದಾಚಾರ, ಮೂಢನಂಬಿಕೆಯನ್ನು ಜನರ ಮನದಿಂದ ಶಾಶ್ವತವಾಗಿ ಅಳಿಸಿದ, ತಮ್ಮ ಕಾಯಕ ಹಾಗೂ ವಚನದ ಮೂಲಕ ಸಮಾಜಕ್ಕೆ ಸಂದೇಶ ನೀಡಿದ ಮಹಾನ್‌ ಶರಣ ಚೌಡಯ್ಯನವರು ಎಂದರು.

ವಿದ್ಯಾರ್ಥಿಗಳು ನಾಳಿನ ದೇಶದ ಸುಧಾರಕರಾಗುತ್ತಾರೆ. ಈ ನಿಟ್ಟಿನಲ್ಲಿ ಮಹಾನ್‌ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪಪಂ ಅಧ್ಯಕ್ಷ ಸುನೀಲಕುಮಾರ ದೇಶಮುಖ ಮಾತನಾಡಿ, ನೇರ-ನುಡಿ ವಚನಗಳಿಂದ ಮನುಕುಲಕ್ಕೆ ದಾರಿದೀಪವಾಗಿದ್ದ ನಿಜ ಶರಣರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ಅನುಸರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

Advertisement

ಪಿಎಸ್‌ಐ ನಾನಾಗೌಡ, ತಹಶೀಲ್ದಾರ್‌ ಎಂ. ಚಂದ್ರಶೇಖರ, ಬಿಆರ್‌ಸಿ ಸಂತೋಷಕುಮಾರ ಪೂಜಾರಿ, ಪಪಂ ಸದಸ್ಯ ಶಿವಾಜಿ ಬೋಗಾರ, ಮುಖಂಡ ರಾಮಣ್ಣ ವಡೇಯರ್‌, ಶೇಷರಾವ್‌ ಕೋಳಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಕೋಲಿ ಸಮುದಾಯದ ಮುಖಂಡರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆಗೆ ತಹಶೀಲ್ದಾರ್‌ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next