Advertisement

ಉಪ್ಪುಂದ ಸರ್ಜಿಕಲ್  ಕೆಲಸಗಾರರಿಗೆ ಪೊಲೀಸ್ ಲಾಠಿ ಪ್ರಹಾರ ಜಿಲ್ಲಾಧಿಕಾರಿಗೆ ದೂರು

07:43 PM Mar 26, 2020 | Sriram |

ಬೈಂದೂರು: ಕೋವಿಡ್‌ 19 ಹಿನ್ನಲೆಯಲ್ಲಿ ವೈದ್ಯಕೀಯ ಸೇವೆಗೆ ಅವಶ್ಯವಾದ ಮಾಸ್ಕ್ ಹಾಗೂ ಸರ್ಜಿಕಲ್ ಬಹಳಷ್ಟು ಬೇಡಿಕೆ ಇದೆ.

Advertisement

ಈಗಾಗಲೆ ವೈದ್ಯರು ಹಾಗೂ ಅಧಿಕಾರಿಗಳು ಜಿಲ್ಲೆಯಲ್ಲಿರುವ ಸರ್ಜಿಕಲ್ ಉದ್ಯಮಗಳಿಗೆ ಅದಷ್ಟು ಹೆಚ್ಚು ಸರಬರಾಜು ಮಾಡಲು ತಿಳಿಸಿದ ಹಿನ್ನಲೆಯಲ್ಲಿ ಉಪ್ಪುಂದ ಬೆಳ್ಕೆ ಯಲ್ಲಿರುವ ಸರ್ಜಿಕಲ್ ಉದ್ಯಮ ಕೋವಿಡ್‌ 19 ಭೀತಿಯಲ್ಲೂ ಕಾರ್ಯನಿರ್ವಹಿಸುತ್ತಿದೆ.

ಇದರ ನಡುವೆ ಕಾರ್ಮಿಕರನ್ನು ಕರೆ ತರುವ ವಾಹನ ಚಾಲಕನಿಗೆ ಬೈಂದೂರು ಠಾಣಾಧಿಕಾರಿಗಳ ಜೀಪ್ ಚಾಲಕ ಹೊಡೆದಿರುವ ಪರಿಣಾಮ ಸರ್ಜಿಕಲ್ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.

ಇದರಿಂದಾಗಿ ಅತಿ ಅಗತ್ಯವಾದ ಸರ್ಜಿಕಲ್ ಸಲಕರಣೆ ದೊಡ್ಡ ಸಮಸ್ಯೆಯಾಗುತ್ತಿದೆ.ಈ ಪ್ರಕರಣದ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಬೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next