Advertisement

ಸರ್ಜಿಕಲ್‌ ದಾಳಿ ವೀಡಿಯೋ: ವಾಕ್ಸಮರದ ಹಿನ್ನೆಲೆ ಧ್ವನಿ !

06:00 AM Jun 29, 2018 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯು 2016ರ ಸೆಪ್ಟಂಬರ್‌ನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್‌ ದಾಳಿಯ ವೀಡಿಯೋ ವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ರಾಜಕೀಯ ಕಾರಣಕ್ಕೆ ಮೋದಿ ನೇತೃತ್ವದ ಸರಕಾರ ಇದನ್ನು ಬಳಸುತ್ತಿದೆ ಎಂದು ಕಾಂಗ್ರೆಸ್‌ ಆಕ್ಷೇಪಿಸಿದರೆ, ಸೇನೆಯ ಬಗ್ಗೆ ಶಂಕೆ‌ ಪಟ್ಟ ತಪ್ಪನ್ನು ಕಾಂಗ್ರೆಸ್‌ ಅರಿಯಬೇಕು ಎಂದು ದಾಳಿ ವೇಳೆ ರಕ್ಷಣಾ ಸಚಿವರಾಗಿದ್ದ ಮನೋಹರ ಪಾರೀಕರ್‌ ಹೇಳಿದ್ದಾರೆ. ಈ ಮಧ್ಯೆ ಇದರಿಂದ ಏನಾದರೂ ಪ್ರತಿಫ‌ಲ ಸಿಕ್ಕಿತೇ ಎಂದು ಚರ್ಚಿಸುವಂತೆ ಜಮ್ಮು ಕಾಶ್ಮೀರ ಮಾಜಿ ಸಿಎಂ ಉಮರ್‌ ಅಬ್ದುಲ್ಲಾ ಹೇಳಿದ್ದಾರೆ.

Advertisement

ವೀಡಿಯೋದಲ್ಲಿ ಏನಿದೆ ?
ವೀಡಿಯೋದಲ್ಲಿ ಸೇನೆಯು ಪಾಕ್‌ನ ಬಂಕರ್‌ಗಳು, ಸೇನಾ ನೆಲೆಗಳನ್ನು ಉಡಾಯಿಸಿದ ದೃಶ್ಯಗಳಿವೆ. ಇದನ್ನು ಡ್ರೋಣ್‌ ಮತ್ತು ಥರ್ಮಲ್‌ ಇಮೇಜಿಂಗ್‌ ಬಳಸಿ ಚಿತ್ರೀಕರಿಸಲಾಗಿದೆ. ಉರಿ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಸೆ. 28ರ ರಾತ್ರಿ ನಡೆಸಿದ ದಾಳಿಯಲ್ಲಿ ಭಾರೀ ಸಂಖ್ಯೆಯ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.

ನೈಟ್‌ ವಿಷನ್‌ ಸಾಧನ, ಟಾವರ್‌ 21, ಎಕೆ 47 ರೈಫ‌ಲ್‌ಗ‌ಳು, ರಾಕೆಟ್‌ನಿಂದ ಉಡಾಯಿಸುವ ಗ್ರೆನೇಡ್‌ಗಳು, ಕ್ಷಿಪಣಿ ಉಡಾವಣ ಸಾಧನ ಮತ್ತಿತರ ವಸ್ತುಗಳನ್ನು  ಸೇನೆ ಹೊತ್ತೂಯ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next