Advertisement

ಸುತ್ತಿಗೆಯಿಂದ ಹೊಡೆದು ನಿವೃತ್ತ ಯೋಧನ ಕೊಲೆ

10:15 AM Apr 14, 2022 | Team Udayavani |

ಬೆಂಗಳೂರು: ನಿವೃತ್ತ ಯೋಧರೊಬ್ಬರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಲಸೂರು ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

Advertisement

ದೊಮ್ಮಲೂರಿನ ಗೌತಮನಗರ ನಿವಾಸಿ ಜುಡೆ ಅಲಿ ಯಾಸ್‌ ಸುರೇಶ್‌ (56) ಕೊಲೆಯಾದವರು.

ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುರೇಶ್‌, ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಚೇಧನ ನೀಡಿ ತಾಯಿಯೊಂದಿಗೆ ದೊಮ್ಮಲೂರಿನ ಗೌತಮನಗರದಲ್ಲಿ ವಾಸವಾಗಿದ್ದರು. ಮೂರು ವರ್ಷಗಳ ಹಿಂದೆ ತಾಯಿ ಮೃತಪಟ್ಟ ಬಳಿಕ ಒಬ್ಬರೆ ಮನೆಯಲ್ಲಿದ್ದರು. ಈ ಮಧ್ಯೆ ಸೋದರ ಸಂಬಂಧಿಗಳ ಜತೆ ಕುಟುಂಬದ ಆಸ್ತಿ ವಿಚಾರವಾಗಿ ಪದೇ ಪದೆ ಗಲಾಟೆ ನಡೆಯುತ್ತಿತ್ತು. ತಾಯಿ ತೀರಿಕೊಂಡ ಬಳಿಕ ಜಗಳ ತಾರಕ್ಕೆರಿದ್ದು, ಸೋದರ ಸಂಬಂಧಿಗಳು ಆಗಾಗ್ಗೆ ಮನೆಗೆ ಬಂದು ಸುರೇಶ್‌ಗೆ ಧಮ್ಕಿ ಹಾಕಿ ಹೋಗುತ್ತಿದ್ದರು ಎಂಬುದು ಗೊತ್ತಾಗಿದೆ.

ಈ ಸಂಬಂಧ ಈ ಹಿಂದೆ ಹಲಸೂರು ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಮನೆಯ ಹಿಂಬಾಗಿಲ ಮೂಲಕ ಒಳ ನುಗ್ಗಿರುವ ದುಷ್ಕರ್ಮಿಗಳು, ಮೊದಲಿಗೆ ಖಾರದ ಪುಡಿಯಿಂದ ಸುರೇಶ್‌ ಮುಖಕ್ಕೆ ಎರಚಿದ್ದಾರೆ. ಬಳಿಕ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾರೆ. ಅನಂತರವೂ ಮೃತದೇಹದ ಸುತ್ತಲು ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ.

ನೆರೆಮನೆಯವರಿಂದ ಪ್ರಕರಣ ಬೆಳಕಿಗೆ

Advertisement

ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನೆರೆ ಮನೆಯವರು ಸುರೇಶ್‌ಗೆ ಮೊಬೈಲ್‌ ಕರೆ ಮಾಡಿದ್ದಾರೆ. ಆದರೆ, ಫೋನ್‌ ಸ್ವಿಚ್ಚ್ ಆಫ್ ಆಗಿತ್ತು. ಬಳಿಕ ಮನೆ ಬಳಿ ಹೋಗಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಕಿಟಕಿ ತೆರೆದು ನೋಡಿದಾಗ ಮಧ್ಯದ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಸುರೇಶ್‌ ಬಿದ್ದಿದ್ದು, ಕೂಡಲೇ ಅವರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ವಿಚಾರ ತಿಳಿದು ಸ್ಥಳಕ್ಕೆ ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್‌ ಆಯುಕ್ತ ಸುಬ್ರಹ್ಮೇಶ್ವರ್‌ರಾವ್‌, ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್‌ ಗುಳೇದ್‌, ಹಲಸೂರು ಎಸಿಬಿ ಮತ್ತು ಠಾಣೆ ಇನ್‌ಸ್ಪೆಕ್ಟರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next