Advertisement

ಸುರತ್ಕಲ್‌: ಹಿಂ.ಜಾ.ವೇ. ಕಾರ್ಯಕರ್ತನ ಮೇಲೆ ಹಲ್ಲೆ ಯತ್ನ

06:20 AM Jan 09, 2018 | Team Udayavani |

ಸುರತ್ಕಲ್‌: ಸುರತ್ಕಲ್‌ ಬಳಿಯ ಅಗರಮೇಲು ರೈಲ್ವೇ ಸೇತುವೆ ಬಳಿ ಸುರತ್ಕಲ್‌ ಹಿಂದೂ ಜಾಗರಣಾ ವೇದಿಕೆ  ಸಹಸಂಚಾಲಕ ಭರತ್‌ ಅಗರಮೇಲು ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. 

Advertisement

ಕೇಬಲ್‌ ಕೆಲಸದಲ್ಲೂ ಭರತ್‌ ತೊಡಗಿಸಿಕೊಂಡಿದ್ದು ರಾತ್ರಿ ಮನೆಗೆ ತೆರಳುವ ಸಂದರ್ಭ ಪೊದೆಯಿಂದ ಹೊರಬಂದ ನಾಲ್ಕು ಮಂದಿ  ಹಲ್ಲೆಗೆ ಯತ್ನಿಸಿದ್ದಾರೆ.

ಪೊದೆಯಲ್ಲಿ ಅಡಗಿದ್ದವರು ಏಕಾಏಕಿ ಮೇಲೇಳುತ್ತಿದ್ದಂತೆ ಬೆ„ಕ್‌ ಸ್ಥಳದಲ್ಲೇ ಬಿಟ್ಟು ಓಡಿದ ಪರಿಣಾಮ ಭರತ್‌ ಅಪಾಯದಿಂದ 
ಪಾರಾಗಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದರು.

ದೀಪಕ್‌ ರಾವ್‌ ಹತ್ಯೆಯ ಬಳಿಕ ಭರತ್‌ ಮುಂಜಾಗರೂಕತೆಯಿಂದ ಹೋಗುತ್ತಿದ್ದರು. ಸುರತ್ಕಲ್‌ ಠಾಣೆಯಲ್ಲಿ ಭರತ್‌ ಅವರು ಈ ಬಗ್ಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next