Advertisement

ಸುರತ್ಕಲ್‌ ಅಕ್ರಮ ಟೋಲ್‌: ಅ.28 ರಿಂದ ಅನಿರ್ದಿಷ್ಟಾವಧಿ ಧರಣಿ

12:27 PM Oct 20, 2022 | Team Udayavani |

ಸುರತ್ಕಲ್‌ : ಸುರತ್ಕಲ್‌ ಅಕ್ರಮ ಟೋಲ್‌ಗೇಟ್‌ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಟೋಲ್‌ ಸಂಗ್ರಹ ಸ್ಥಗಿತಗೊಳ್ಳುವವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅ. 28ರಿಂದ ಟೋಲ್‌ಗೇಟ್‌ ಸಮೀಪ ಅನಿರ್ದಿಷ್ಟಾವಧಿ ಧರಣಿ ನಡೆಸಲು ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ಸಭೆ ತೀರ್ಮಾನಿಸಿದೆ.

Advertisement

ಜಿಲ್ಲಾಡಳಿತ, ಸಂಸದರ ಕಾಲಮಿತಿ ನ. 7ಕ್ಕೆ ಅಂತ್ಯಗೊಳ್ಳುತ್ತದೆ. ಅದಕ್ಕೆ ಹತ್ತು ದಿನ ಮುಂಚಿತವಾಗಿ ಅ. 28ಕ್ಕೆ ಧರಣಿ ಆರಂಭಿಸಿ ಜನಾಭಿಪ್ರಾಯ ಬಲಗೊಳಿಸಲು ಹಾಗೂ ಹೋರಾಟ ಮುಂದುವರಿಸಲು ತೀರ್ಮಾ ನಿಸಲಾಯಿತು.

ಸಮಿತಿಯ ಸಹ ಸಂಚಾಲಕ ಪುರುಷೋತ್ತಮ ಚಿತ್ರಾಪುರ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಮುನೀರ್‌ ಕಾಟಿಪಳ್ಳ, ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳೆಪಾಡಿ, ದಲಿತ ಮುಖಂಡ ಎಂ. ದೇವದಾಸ್‌, ರಘು ಎಕ್ಕಾರು, ಸಾಮಾಜಿಕ ಮುಖಂಡ ಎಂ.ಜಿ. ಹೆಗ್ಡೆ, ವೈ. ರಾಘವೇಂದ್ರ ರಾವ್‌, ಡಿವೈಎಫ್‌ಐ ಮುಖಂಡ ಬಿ. ಕೆ. ಇಮಿ¤ಯಾಜ್‌, ಶ್ರೀನಾಥ್‌ ಕುಲಾಲ್‌, ವಿವಿಧ ಸಂಘಟನೆಗಳ ಪ್ರಮುಖರಾದ ಕಿಶನ್‌ ಕುಮಾರ್‌ ಕೊಲ್ಕೆಬೈಲು, ವಸಂತ ಬರ್ನಾಡ್‌, ರಾಜೇಶ್‌ ಪೂಜಾರಿ ಕುಳಾಯಿ, ದಿನೇಶ್‌ ಕುಂಪಲ, ಹರೀಶ್‌ ಪೇಜಾವರ, ಶೇಖರ ಹೆಜಮಾಡಿ, ರಮೇಶ್‌ ಟಿ. ಎನ್‌., ಶ್ರೀಕಾಂತ್‌ ಸಾಲ್ಯಾನ್‌, ಮಾಜಿ ಕಾರ್ಪೋರೆಟರ್‌ ಗಳಾದ ಪ್ರತಿಭಾ ಕುಳಾç, ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next