Advertisement

Surathkal: ಅನುಮಾನಾಸ್ಪದ ಸಾವು

11:54 PM Feb 09, 2024 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪದ ಮಧ್ಯ ನಿವಾಸಿ ಜಗದೀಶ್‌ ಅವರು ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಅವರ ಮೃತದೇಹ ಹಳೆಯ ಪೊಲೀಸ್‌ ಠಾಣೆಯ ಕ್ಯಾಂಟೀನ್‌ನಲ್ಲಿ ಶುಕ್ರವಾರ ಪತ್ತೆಯಾಗಿದೆ.

Advertisement

ಕ್ಯಾಟೀನ್‌ನ ಕಲ್ಲಿನ ಹಾಸಿನ ಕುರ್ಚಿಯಿಂದ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯ, ಕೈಯ್ಯಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಇವರ ಬಳಿಯಿದ್ದ ಪ್ಲಾಸ್ಟಿಕ್‌ ಚೀಲ ಮತ್ತು ಹೊದಿಕೆ, ಕಲ್ಲಿನ ಹಾಸುಗಳಲ್ಲಿ ರಕ್ತ ಮಡುಗಟ್ಟಿತ್ತು. ರಸ್ತೆ ಬದಿಯಲ್ಲಿಯೂ ರಕ್ತದ ಕಲೆಗಳು ಕಂಡು ಬಂದಿವೆ.

ರಾತ್ರಿ ಕುಡಿದ ಮತ್ತಿನಲ್ಲಿ ಹೊಡೆದಾಟವಾಗಿರುವ ಸಾಧ್ಯತೆಯಿದ್ದು, ಸ್ಥಳಕ್ಕೆ ಸುರತ್ಕಲ್‌ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next