Advertisement

ಮಕ್ಕಳ ಕಲಿಕೆಗೆ ಶೈಕ್ಷಣಿಕ ಮೇಳಗಳು ಸಹಕಾರಿ: ಓಲೇಕಾರ

05:16 PM Jan 11, 2020 | Naveen |

ಸುರಪುರ: ಮಕ್ಕಳ ಕಲಿಕೆ ಅಭಿವೃದ್ಧಿ ಪಡಿಸುವಲ್ಲಿ ಶೈಕ್ಷಣಿಕ ಮೇಳಗಳು ಸಹಕಾರಿಯಾಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೇಕಾರ ಹೇಳಿದರು.

Advertisement

ತಾಲೂಕಿನ ದೇವಾಪುರ ಹರಿಜನ ವಾರ್ಡ್‌ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಜೀಂ ಪ್ರೇಮಜಿ ಫೌಂಡೇಶನ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾಷಾ ಮತ್ತು ಗಣಿತ ಮೇಳದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಳಗಳಲ್ಲಿ ಮಕ್ಕಳ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದಂತೆ ಅನೇಕ ಪರಿಕಲ್ಪನೆಗಳನ್ನು ಉತ್ತಮವಾಗಿ ಅಭಿವ್ಯಕ್ತಿಸಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಎಪಿಎಫ್‌ನ ತಾಲೂಕು ಸಂಯೋಜಕ ಸುರೇಶಗೌಡ ಮಾತನಾಡಿ, ಈ ರೀತಿಯ ಶೈಕ್ಷಣಿಕ ಮೇಳಗಳನ್ನು ಗ್ರಾಮೀಣ ಭಾಗಗಳಲ್ಲಿ ಹಮ್ಮಿಕೊಳ್ಳುವುದರಿಂದ ಈ ಭಾಗದ ಮಕ್ಕಳಲ್ಲಿ ಉತ್ತಮವಾದ ಕಲಿಕೆ ಉಂಟು ಮಾಡುತ್ತದೆ. ಮಕ್ಕಳು ನಿರಂತರವಾಗಿ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಅನುಭವಾತ್ಮಕವಾಗಿ ಕಲಿತಿರುವುದಕ್ಕೆ ಈ ಮೇಳ ಸಾಕ್ಷಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಸದಸ್ಯ ನಂದನಗೌಡ ಪಾಟೀಲ, ಮೇಳಗಳಲ್ಲಿ ಮಕ್ಕಳ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೇಳಗಳಲ್ಲಿ ಸನ್ನಿವೇಶ ನೋಡಿ ವಿವರಿಸುವುದು, ಚಿತ್ರ ನೋಡಿ ಕಥೆ ರಚಿಸುವುದು, ಸ್ವಂತ ವಾಕ್ಯ ಬಳಸಿ, ಗಾದೆ ಮಾತುಗಳು, ಪದ ರಚನೆ, ಕಥೆಗೆ ಶೀರ್ಷಿಕೆ ಬರೆ, ಗಣಿತದ ಮೂಲಕ್ರಿಯೆಗಳು, ನನ್ನ ಸಮಯ, ಆಕೃತಿಗಳು, ಹಾವು ಏಣಿ ಆಟ ಹೀಗೆ ಅನೇಕ ವಿಷಯಗಳ ಕುರಿತು ಮಕ್ಕಳು ವಿವರಿಸಿದರು. ಮುಷ್ಟೂರ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆ, ಹಂದ್ರಾಳ ಸರ್ಕಾರಿ ಪ್ರಾಥಮಿಕ ಶಾಲೆ, ಗೋನಾಲ ಎಸ್‌ಡಿ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಭಾಗವಹಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಎಂ. ಜಾಂಗಿನ, ಗ್ರಾಪಂ ಸದಸ್ಯ ಅಯ್ಯಪ್ಪ ಗಂಜಾಳ, ರೇಣುಕಾ, ಪ್ರಮುಖರಾದ ಚನ್ನಪ್ಪಗೌಡ, ರಮೇಶ ಕವಲಿ, ಚನ್ನಬಸಪ್ಪ ತಳವಾರ, ಮಹಾದೇವ, ಹಸನಪ್ಪ ತಳವಾರ, ಬಿಆರ್‌ಪಿ ಕಾಂತೇಶ, ಸಿಆರ್‌ಪಿ ಯಂಕಣ್ಣ ಹುಲಕಲ್‌, ಮುಖ್ಯ ಶಿಕ್ಷಕ ಕಾಸೀಂ ಬಾಗವಾನ, ಶಿಕ್ಷಕರಾದ ಭೀಮಣ್ಣ ಹುದ್ಧಾರ, ರಾಜಶೇಖರ ಭಾಸಗಿ, ಮಲ್ಲಣ್ಣ ಸಜ್ಜನ, ರಾಜಣ್ಣ, ರಾಜಶೇಖರ ಚಿಲ್ಲಾಳ, ಶಿವಶರಣ, ರಾಜಶೇಖರ ಕಲ್ಲೂರಮಠ, ರೇಖಾ,
ಆರತಿ, ಪವಿತ್ರ, ಎಪಿಎಫ್‌ನ ಪರಮಣ್ಣ ತೆಳಗೇರಿ, ಅಜೀಮ್‌, ಶಿವುಕುಮಾರ, ಅನ್ವರ ಜಮಾದಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next