Advertisement

ಖಾಸಗಿ ಕಂಪನಿಗಳಿಗೆ ಸುಪ್ರೀಂ ನೆಮ್ಮದಿ

10:31 PM Apr 02, 2019 | Team Udayavani |

ನವದೆಹಲಿ: ವಿದ್ಯುತ್‌, ಸಕ್ಕರೆ, ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಕಂಪನಿಗಳಿಗೆ ಸುಪ್ರೀಂಕೋರ್ಟ್‌ ಮಂಗಳವಾರ ನೀಡಿದ ತೀರ್ಪಿನಿಂದ ನೆಮ್ಮದಿ ಸಿಕ್ಕಿದಂತಾಗಿದೆ.

Advertisement

ಆರ್‌ಬಿಐ ಫೆ.12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ 2 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಸಾಲ ಇರುವ ಕಂಪನಿ ಮರುಪಾವತಿ ಮಾಡುವುದರಲ್ಲಿ ಒಂದು ದಿನ ವಿಳಂಬವಾದರೂ ಅದನ್ನು ನಷ್ಟ ಹೊಂದಿದ ಕಂಪನಿ ಎಂದು ಘೋಷಿಸಬೇಕೆಂದು ಸೂಚಿಸಿತ್ತು.

ಅದನ್ನು ಪ್ರಶ್ನಿಸಿ ಖಾಸಗಿ ಕಂಪನಿಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ನ್ಯಾಯಮೂರ್ತಿಗಳಾದ ಆರ್‌.ಎಫ್.ನಾರಿಮನ್‌ ಮತ್ತು ವಿನೀತ್‌ ಶರಣ್‌ ನೇತೃತ್ವದ ನ್ಯಾಯಪೀಠ ಸುತ್ತೋಲೆಯೇ ಅಕ್ರಮ ಎಂದು ಸಾರಿದೆ. ಜತೆಗೆ ಇದು ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ ವ್ಯಾಪ್ತಿಯಿಂದ ಹೊರತಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next