Advertisement

ಕಂಬಳ ಕುರಿತು ಪ್ರತಿಕ್ರಿಯೆ ನೀಡಲು ಸುಪ್ರೀಂ ಸೂಚನೆ

06:55 AM Dec 08, 2018 | Team Udayavani |

ನವದೆಹಲಿ: ಕಂಬಳಕ್ಕೆ ಅನುಮತಿ ನೀಡಿ ಕರ್ನಾಟಕ ಸರ್ಕಾರ ಹೊರಡಿಸಿರುವ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿ ಪ್ರಾಣಿ
ದಯಾ ಸಂಘಟನೆ ಪೆಟಾ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌ ಹೊರಡಿಸಿದೆ.

Advertisement

ಶುಕ್ರವಾರ ಈ ಅರ್ಜಿಯನ್ನು ನ್ಯಾಯ ಮೂರ್ತಿಗಳಾದ ಮದನ್‌ ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ಕಳೆದ ಫೆಬ್ರವರಿಯಲ್ಲೇ ಈ ಪ್ರಕರಣವನ್ನು ತಮಿಳುನಾಡಿನ ಜಲ್ಲಿಕಟ್ಟು ಹಾಗೂ ಮಹಾರಾಷ್ಟ್ರದ ಎತ್ತಿನ ಗಾಡಿ ರೇಸ್‌ ವಿರೋಧಿಸಿ ಸಲ್ಲಿಸಲಾದ ಬಾಕಿ ಅರ್ಜಿಗಳೊಂದಿಗೆ ಸೇರಿಸಿತ್ತು.

1960 ರ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾನೂನಿನ ಮೂಲ ಅಂಶಕ್ಕೆ ಕರ್ನಾಟಕ ಹೊರಡಿಸಿರುವ ಕಾನೂನು ವಿರುದ್ಧವಾಗಿದೆ. ಈ ಕಾಯ್ದೆಯಲ್ಲಿ ಪ್ರಾಣಿಗಳ ಮೇಲೆ ಕ್ರೌರ್ಯ ನಡೆಸುವುದನ್ನು ಅನುಮೋದಿಸಲಾಗಿದೆ ಎಂದು ಪೆಟಾ ತನ್ನ ಅರ್ಜಿಯಲ್ಲಿ ಆರೋಪಿಸಿದೆ. ಕಂಬಳಕ್ಕೆ ಅನುಮತಿ ನೀಡಿ ಪ್ರಾಣಿಗಳ ಮೇಲೆ ಹಿಂಸೆ ತಡೆ ಕಾಯ್ದೆ 2017ಕ್ಕೆ ಕರ್ನಾಟಕ ಸರ್ಕಾರ ತಿದ್ದುಪಡಿ ತಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next