Advertisement

ಕೊರೊನಾ ಸೋಂಕು : ಜೈಲುಗಳ ಬಗ್ಗೆ ಸುಪ್ರೀಂ ಕಳವಳ

10:05 AM Mar 18, 2020 | Hari Prasad |

ದೇಶಾದ್ಯಂತ ಕೊರೊನಾ ಸೋಂಕು ಹಬ್ಬುತ್ತಿದ್ದು, ಜೈಲುಗಳಲ್ಲಿ ಕೈದಿಗಳ ಸಂಖ್ಯೆಯೂ ಹೆಚ್ಚಿರುವ ಕಾರಣ ಈ ಕುರಿತು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌, ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆ ಕೋರಿದೆ.

Advertisement

ಜೈಲುಗಳಲ್ಲಿ ಕೋವಿಡ್‌-19 ವೈರಸ್‌ ಹಬ್ಬದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ಮಾ. 20ರೊಳಗಾಗಿ ಒದಗಿಸುವಂತೆ ಜೈಲುಗಳ ಪ್ರಧಾನ ನಿರ್ದೇಶಕರು ಹಾಗೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

ಈ ನಡುವೆ, ಸೋಮವಾರದಿಂದ ಸುಪ್ರೀಂ ಕೋರ್ಟ್‌ನ ಆವರಣದೊಳಕ್ಕೆ ಪ್ರವೇಶಿಸುವ ಎಲ್ಲ ವಕೀಲರು, ಅರ್ಜಿದಾರರು, ಪತ್ರಕರ್ತರು, ಪೊಲೀಸರು ಹಾಗೂ ಸಾರ್ವ ಜನಿಕರ ಸ್ಕ್ರೀನಿಂಗ್‌ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next