Advertisement

ಅಯೋಧ್ಯೆ ಸಾಧಾರಣ ಭೂ ವಿವಾದ: ಸುಪ್ರೀಂಕೋರ್ಟ್‌

09:10 AM Feb 09, 2018 | Team Udayavani |

ಹೊಸದಿಲ್ಲಿ: ದಶಕಗಳಿಂದ ಚಾಲ್ತಿಯಲ್ಲಿರುವ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಪ್ರಕರಣವು ಸಾಧಾ ರಣ ಭೂವಿವಾದವಾಗಿದ್ದು, ಅದನ್ನು ಸಹಜ ಕಲಾಪದಂ ತೆಯೇ ವಿಚಾರಣೆಗೊಳಪಡಿಸಿ ಇತ್ಯರ್ಥಪಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

Advertisement

ಪ್ರಕರಣದ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ, ಗುರುವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು.  ಈ ವೇಳೆ, ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಈ ಪ್ರಕರಣವಿದ್ದಾಗ, ಪ್ರಕರಣದ ಕಕ್ಷಿದಾರರಾಗಿದ್ದವರೇ ಸುಪ್ರೀಂ ಕೋರ್ಟ್‌ ವಿಚಾರಣೆಯಲ್ಲೂ ಕಕ್ಷಿದಾರರಾಗಿರಬೇಕೆಂದು, ಇತ್ತೀಚೆಗೆ ಪ್ರಕರಣದ ಬಗ್ಗೆ ವಿವಿಧ ನಾಗರಿಕರು, ಸಂಸ್ಥೆಗಳು ಸಲ್ಲಿಸಿರುವ ಮನವಿಗಳನ್ನು ಆನಂತರ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ಸೂಚಿಸಿತು. ಅಲ್ಲದೆ, ಹೊಸ ಕಕ್ಷಿದಾರರು ಸಲ್ಲಿಸಿರುವ ದಾಖಲೆಗಳನ್ನು ಇಂಗ್ಲೀಷ್‌ಗೆ ತರ್ಜುಮೆ ಮಾಡಿ 2 ವಾರಗಳ ಒಳಗೆ ನೀಡುವಂತೆ ನ್ಯಾಯಪೀಠ ಸೂಚಿಸಿತು. ನಂತರ ಮುಂದಿನ ವಿಚಾರಣೆ ಮಾ.14ಕ್ಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next