Advertisement

ಪ್ರಶಾಂತ್ ಭೂಷಣ್ ಗೆ ಸುಪ್ರೀಂನಲ್ಲಿ ಮತ್ತೆ ಹಿನ್ನಡೆ:ಏನಿದು ಟ್ವೀಟ್ ವಿವಾದ,ನ್ಯಾಯಾಂಗ ನಿಂದನೆ

03:25 PM Aug 21, 2020 | Nagendra Trasi |

ನವದೆಹಲಿ: ಸುಪ್ರೀಂಕೋರ್ಟ್ ಸಿಜೆಐ ಹಾಗೂ ಸುಪ್ರೀಂಕೋರ್ಟ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿ ಸಲ್ಲಿಸುವವರೆಗೂ ಪ್ರಕರಣದ ವಿಚಾರಣೆ ಮುಂದೂಡಬೇಕು ಎಂದು ಕೋರಿ ವಕೀಲ ಪ್ರಶಾಂತ್ ಭೂಷಣ್ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಭೂಷಣ್ ಗೆ ಮತ್ತೊಂದು ಹಿನ್ನಡೆಯಾದಂತಾಗಿದೆ.

Advertisement

ನಿಂದನಾತ್ಮಕ ಟ್ವೀಟ್ ಸಂಬಂಧ ಭೂಷಣ್ ಅವರನ್ನು ಸುಪ್ರೀಂಕೋರ್ಟ್ ದೋಷಿ ಎಂದು ತಿಳಿಸಿತ್ತು. ಬೇರೊಂದು ನ್ಯಾಯಪೀಠದ ಮೂಲಕ ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಭೂಷಣ್ ಪರ ವಕೀಲರು ವಾದಿಸಿದ್ದು, ಸುಪ್ರೀಂ ಈ ತೀರ್ಪು ಅಂತಿಮ. ಶಿಕ್ಷೆಯ ನಂತರ ತೀರ್ಪು ಪೂರ್ಣಗೊಳ್ಳಲಿದೆ ಎಂದು ತಿಳಿಸಿತ್ತು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌. ಎ. ಬೋಬ್ದೆ ಮತ್ತು ಸುಪ್ರೀಂ ಕೋರ್ಟ್‌ ವಿರುದ್ಧ ನಿಂದನಾತ್ಮಕ ಟ್ವೀಟ್‌ ಮಾಡಿದ್ದ ವಕೀಲ ಪ್ರಶಾಂತ್‌ ಭೂಷಣ್‌ರನ್ನು ಸರ್ವೋಚ್ಚ ನ್ಯಾಯಾಲಯವು “ದೋಷಿ’ ಎಂದು ಘೋಷಿಸಿ ಈ ಸಂಬಂಧ ಆ. 20ರಂದು ಶಿಕ್ಷೆ ಪ್ರಕಟಿಸುವುದಾಗಿ ತಿಳಿಸಿತ್ತು.

ಪ್ರಶಾಂತ್‌ ಭೂಷಣ್‌ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್‌, ತೀರ್ಪಿನಲ್ಲಿ ಅವರು ಮಾಡಿದ್ದ ಪ್ರಮುಖ 2 ಟ್ವೀಟ್‌ಗಳನ್ನು ನ್ಯಾಯಾಂಗ ನಿಂದನೆ ವ್ಯಾಪ್ತಿಗೊಳಪಡಿಸಿತ್ತು. ಈ ಕುರಿತು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಬಿ.ಆರ್‌. ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಪ್ರಶಾಂತ್‌ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.

ಜೈಲು ಶಿಕ್ಷೆ ಸಾಧ್ಯತೆ: ಪ್ರಶಾಂತ್‌ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಅಥವಾ ಜೈಲು ವಾಸ ಮತ್ತು ದಂಡ ಎರಡೂ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

Advertisement

ಮುಳುವಾದ 2 ಟ್ವೀಟ್‌: “ಸುಪ್ರೀಂನ ಹಿಂದಿನ 6 ಸಿಜೆಐಗಳು ಕಳೆದ 6 ವರ್ಷಗಳಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರದೆ ಪ್ರಜಾಪ್ರಭುತ್ವವನ್ನು ನಾಶ ಮಾಡಿದ್ದಾರೆ’, “ಸಿಜೆಐ ಎಸ್‌.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್‌ನಲ್ಲಿ ಹೆಲ್ಮೆಟ್‌ ಧರಿಸದೆ ಜಾಲಿ ರೈಡ್‌ ಮಾಡುತ್ತಿದ್ದಾರೆ ಎಂದು ಪ್ರಶಾಂತ್‌ ಟ್ವೀಟ್‌ನಲ್ಲಿ ನಿಂದಿ ಸಿದ್ದರು. ವಾಸ್ತವವಾಗಿ, ಸ್ಟಾಂಡ್‌ ಹಾಕಿದ್ದ ಬೈಕ್‌ ಮೇಲೆ ನ್ಯಾಣ ಬೋಬ್ದೆ ಕುಳಿತು ಫೋಟೋ ತೆಗೆಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next