Advertisement

ಧಾರ್ಮಿಕ ಕ್ಷೇತ್ರ ಪ್ರವೇಶ: 12ರಿಂದ ದಿನಂಪ್ರತಿ ವಿಚಾರಣೆ

10:00 AM Feb 07, 2020 | Team Udayavani |

ಹೊಸದಿಲ್ಲಿ: ಕಾನೂನು ವ್ಯಾಪ್ತಿಯ ಪ್ರಶ್ನೆಯ ಕುರಿತ ವಿಚಾರಣೆಯನ್ನು ವಿಸ್ತೃತ ನ್ಯಾಯಪೀಠಕ್ಕೆ ವಹಿಸಬೇಕೋ ಬೇಡವೋ ಎಂಬುದರ ಬಗ್ಗೆ ಫೆ. 10ರಂದು ತೀರ್ಮಾನ ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.

Advertisement

ಶಬರಿಮಲೆ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನೀತಿ ಅನುಸರಿಸಲಾಗುತ್ತದೆ ಎಂಬ ಆರೋಪಗಳಿಗೆ ಸಂಬಂಧಿಸಿದ ವಿಚಾರಣೆ ವೇಳೆ ಸಿಜೆಐ ಎಸ್‌.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಅಂಶ ಸ್ಪಷ್ಟಪಡಿಸಿದೆ. ಜತೆಗೆ ಫೆ. 12 ರಿಂದ ದಿನವಹಿ ವಿಚಾರಣೆ ಕೈಗೊಳ್ಳುವುದಾಗಿಯೂ ಹೇಳಿದೆ.

ಗುರುವಾರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ‘ಕಾನೂನು ವ್ಯಾಪ್ತಿಯ ವಿಚಾರಕ್ಕಾಗಿನ ಪ್ರಶ್ನೆಗಳನ್ನು ವಿಸ್ತೃತ ನ್ಯಾಯಪೀಠಕ್ಕೆ ಒಪ್ಪಿಸಿರುವ ಸುಪ್ರೀಂಕೋರ್ಟ್‌ ನಿರ್ಧಾರ ಸರಿಯಾಗಿಯೇ ಇದೆ’ ಎಂದರು. ಮತ್ತೂಬ್ಬ ಹಿರಿಯ ನ್ಯಾಯವಾದಿ ಎಫ್.ಎಸ್‌. ನಾರಿಮನ್‌, ಈ ಪ್ರಸ್ತಾವ‌ ವಿರೋಧಿಸಿ ರಾಷ್ಟ್ರೀಯ ಮಹತ್ವವಿರುವ ಪ್ರಶ್ನೆಗಳನ್ನು ರಾಷ್ಟ್ರಪತಿ ಮಾತ್ರ ಕೇಳಲು ಅವಕಾಶವಿದೆ. ಕೋರ್ಟ್‌ಗಳಿಗೆ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next