Advertisement

ಶಬರಿಮಲೆ ವಿಶೇಷ ಕಾಯ್ದೆ: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

10:13 AM Nov 21, 2019 | Hari Prasad |

ನವದೆಹಲಿ: ಶಬರಿಮಲೆ ದೇಗುಲದ ಆಡಳಿತಕ್ಕಾಗಿಯೇ ವಿಶೇಷ ಕಾನೂನು ರೂಪಿಸುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಆದೇಶ ನೀಡಿದೆ. ಮುಂದಿನ ವರ್ಷದ ಜನವರಿಯ ಮೂರನೇ ವಾರದ ಒಳಗಾಗಿ ಸಂಭಾವ್ಯ ಆಡಳಿತದ ರೀತಿಯ ಬಗ್ಗೆ ವಿವರಣೆ ಸಲ್ಲಿಸುವಂತೆ ಸೂಚನೆ ನೀಡಿದೆ. ಅದರಲ್ಲಿ ಯಾತ್ರಾರ್ಥಿಗಳಿಗೆ ಕಲ್ಪಿಸಲಾಗುವ ಅನುಕೂಲದ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

Advertisement

ಆಡಳಿತ ವ್ಯವಸ್ಥೆಯಲ್ಲಿ ಮೂರನೇ ಒಂದರಷ್ಟು ವ್ಯವಸ್ಥೆಯನ್ನು ಮಹಿಳೆಯರಿಗೆ ನೀಡುವಂತೆಯೂ ನ್ಯಾ.ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ. 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಅಂಶಗಳನ್ನು ಜಾರಿ ಮಾಡುವುದರ ನಿಟ್ಟಿನಲ್ಲಿ ನ್ಯಾಯಪೀಠ ನೀಡಿದ ಆದೇಶ ಮಹತ್ವ ಪಡೆದಿದೆ. ಕೆಲ ದಿನಗಳ ಹಿಂದೆ ನಿವೃತ್ತ ಸಿಜೆಐ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠ ಮಹಿಳೆಯರ ಪ್ರವೇಶ ವಿಚಾರವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next