Advertisement

ಮಾಲೇಗಾಂವ್‌ ಬ್ಲಾಸ್ಟ್‌ ಕೇಸ್‌: ಕ|ಪುರೋಹಿತ್‌ಗೆ ಸುಪ್ರೀಂ ಜಾಮೀನು

11:20 AM Aug 21, 2017 | udayavani editorial |

ಹೊಸದಿಲ್ಲಿ : 2008ರ ಮಾಲೇಗಾಂವ್‌ ಬ್ಲಾಸ್ಟ್‌ ಕೇಸಿನ ಆರೋಪಿಯಾಗಿರುವ ಲೆ| ಕ| ಶ್ರೀಕಾಂತ್‌ ಪ್ರಸಾದ್‌ ಪುರೋಹಿತ್‌ ಗೆ ಸುಪ್ರೀಂ ಕೋರ್ಟ್‌ ಇಂದು ಸೋಮವಾರ, ಮುಂಬಯಿ ಹೈಕೋರ್ಟ್‌ ನ ಈ ಮೊದಲಿನ ಆದೇಶವನ್ನು ಬದಿಗಿರಿಸಿ, ಜಾಮೀನು ಮಂಜೂರು ಮಾಡಿದೆ. 

Advertisement

ಪುರೋಹಿತ್‌ ಗೆ ಮಂಜೂರು ಮಾಡಿರುವ ಜಾಮೀನಿಗೆ ಸುಪ್ರಿಂ ಕೋರ್ಟ್‌ ಶರತ್ತುಗಳನ್ನು ನಮೂದಿಸಿದೆ ಎಂದು ತಿಳಿದು ಬಂದಿದೆ. 

“ನಾನು ರಾಜಕೀಯದಾಟದ ಬಲಿಪಶುವಾಗಿದ್ದೇನೆ. ಕಳೆದ ಒಂಬತ್ತು ವರ್ಷಗಳಿಂದ ನಾನು ಜೈಲಿನಲ್ಲಿದ್ದೇನೆ. ಆದರೆ ಈ  ವರೆಗೂ ಪ್ರಾಸಿಕ್ಯೂಶನ್‌ ನನ್ನ ವಿರುದ್ಧ  ದೋಷಾರೋಪ ದಾಖಲಿಸಿಲ್ಲ’ ಎಂದು ಕ| ಪುರೋಹಿತ್‌ ಕಳೆದ ಆಗಸ್ಟ್‌ 17ರಂದು ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು. 

ಕ| ಪುರೋಹಿತ್‌ ಅವರ ವಕೀಲ ಹರೀಶ್‌ ಸಾಳ್ವೆ ಅವರಿಂದು ಪುರೋಹಿತ್‌ ಪರವಾಗಿ ಕೋರ್ಟಿನಲ್ಲಿ  ಹಾಜರಾಗಿ ಜಾಮೀನು ಕೋರಿಕೆ ವಿಷಯದಲ್ಲಿ ವಾದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next