Advertisement

ಮಾಜಿ ಎಂಪಿ ಸೌಲಭ್ಯ ಪಿ.ಐ.ಎಲ್‌. ತಿರಸ್ಕೃತ

10:35 AM Apr 17, 2018 | Karthik A |

ಹೊಸದಿಲ್ಲಿ: ಮಾಜಿ ಸಂಸದರಿಗೆ ನಿವೃತ್ತಿ ನಂತರವೂ ನೀಡಲಾಗುವ ಆರ್ಥಿಕ ಸವಲತ್ತು, ಪಿಂಚಣಿ ಹಾಗೂ ಪ್ರಯಾಣ ಭತ್ತೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

Advertisement

ಮಾ. 7ರಂದು ನಡೆದಿದ್ದ ಅರ್ಜಿಯ ಅಂತಿಮ ಹಂತದ ವಿಚಾರಣೆ ವೇಳೆ, ನ್ಯಾ| ಜೆ. ಚೆಲಮೇಶ್ವರ್‌ ಹಾಗೂ ಸಂಜಯ್‌ ಕಿಶನ್‌ ಕೌಲ್‌ ಅವರುಳ್ಳ ನ್ಯಾಯ ಪೀಠದ ಮುಂದೆ ಮಾಜಿ ಸಂಸದರಿಗೆ ನೀಡಲಾಗುವ ಸವಲತ್ತುಗಳನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರಕಾರ, ನಿವೃತ್ತಿಯ ನಂತರವೂ ಸಂಸದರ ಘನತೆ ಕಾಪಾಡುವ ಸಲುವಾಗಿ ಇವುಗಳನ್ನು ನೀಡಲಾಗುತ್ತಿದೆ. 2018ರ ಹಣಕಾಸು ಮಸೂದೆ ಪ್ರಕಾರ ಇದನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಸ್ಪಷ್ಟಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next