Advertisement

ರಾಜೀವ್‌ ಹತ್ಯೆ: ಶಿಕ್ಷೆ ರದ್ದು ಅರ್ಜಿ ತಳ್ಳಿಹಾಕಿದ ಸುಪ್ರೀಂ

08:15 AM Mar 15, 2018 | |

ನವದೆಹಲಿ: ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಎ.ಜಿ.ಪೇರರಿವಾಲನ್‌ ಶಿಕ್ಷೆ ರದ್ದು ಮಾಡಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. 1999ರ ಮೇ 11ರಂದು ಪೇರರಿವಾಲನ್‌ ಮತ್ತು ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಲಾಗಿತ್ತು. ಪೇರರಿವಾಲನ್‌ ತನಗೆ ನೀಡಲಾಗಿರುವ ಶಿಕ್ಷೆ ರದ್ದು ಮಾಡಬೇಕು ಎಂಬ ಮನವಿಯನ್ನು ಪುರಸ್ಕರಿಸಲು ನ್ಯಾಯಪೀಠದ ಮುಂದೆ ಹಾಜರುಪಡಿಸಲಾಗಿರುವ ದಾಖಲೆಗಳು ಪೂರಕವಾಗಿಲ್ಲ ಎಂದು ನ್ಯಾ.ರಂಜನ್‌ ಗೊಗೊಯ್‌ ನೇತೃತ್ವದ ನ್ಯಾಯಪೀಠ ಬುಧವಾರ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಶ್ರೀಲಂಕಾ ರಾಜಧಾನಿ ಕೊಲೊಂಬೋ ಜೈಲಿನಲ್ಲಿರುವ ನಿಕ್ಸನ್‌ ಅಲಿಯಾಸ್‌ ಸುರೇನ್‌ ಎಂಬಾತನನ್ನು ತನಿಖೆ ನಡೆಸಿ ವಿವರ ಸಲ್ಲಿಸುವ ಬಗ್ಗೆ ಸಿಬಿಐಗೆ ನ್ಯಾಯಪೀಠ 4 ವಾರಗಳ ಸಮಯಾವಕಾಶ ನೀಡಿದೆ.

Advertisement

ವಿಚಾರಣೆ ವೇಳೆ ಸಿಬಿಐ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪೇರರಿವಾಲನ್‌ ಅರ್ಜಿ ತಿರಸ್ಕರಿಸಬೇಕು. 1990ರ ಜೂನ್‌ ಮೊದಲ ವಾರದಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದ ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next