Advertisement

Unconditional Apology; ನ್ಯಾಯಾಂಗ ನಿಂದನೆ ಪ್ರಕರಣ: ಲಲಿತ್‌ ಮೋದಿಗೆ ಸುಪ್ರೀಂ ರಿಲೀಫ್

09:54 PM Apr 24, 2023 | Team Udayavani |

ನವದೆಹಲಿ: ಸಾಮಾಜಿಕ ತಾಣಗಳಲ್ಲಿ ಭಾರತೀಯ ನ್ಯಾಯವ್ಯವಸ್ಥೆಯನ್ನು ಟೀಕಿಸಿದ್ದ ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಬೇಷರತ್‌ ಕ್ಷಮೆ ಕೇಳಿದ್ದಾರೆ. ಇದನ್ನು ಮಾನ್ಯಮಾಡಿರುವ ಸರ್ವೋಚ್ಚ ಪೀಠ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿದೆ.

Advertisement

ನ್ಯಾಯಮೂರ್ತಿಗಳಾದ ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರಿದ್ದ ಪೀಠ, ಲಲಿತ್‌ ಮೋದಿಯ ಪ್ರಮಾಣಪತ್ರವನ್ನು ವಿಚಾರಣೆಗೊಳಪಡಿಸಿ, ವಿಚಾರಣೆಯನ್ನು ಕೈಬಿಡಲು ತೀರ್ಮಾನಿಸಿತು.

ಭಾರತೀಯ ನ್ಯಾಯವ್ಯವಸ್ಥೆ ಹಾಗೂ ನ್ಯಾಯಾಲಯಗಳ ಗೌರವ ಹಾಳುವಂತಹ ಯಾವುದೇ ಕೃತ್ಯವನ್ನು ಮುಂದೆ ಮಾಡುವುದಿಲ್ಲ ಎಂದು ಲಲಿತ್‌ ಕ್ಷಮೆಯಾಚಿಸಿದ್ದಾರೆ. ಇದನ್ನು ಒಪ್ಪಿರುವ ನ್ಯಾಯಪೀಠ, ಮುಂದೆಲ್ಲಾದರೂ ಮೋದಿ ಮತ್ತೆ ಇಂತಹ ಕೃತ್ಯವೆಸಗಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next