ಹೊಸದಿಲ್ಲಿ: ಸರಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಇಲಾಖೆಯ ಅನುಮತಿ ಕಡ್ಡಾಯ. ಆದರೆ ಭಾರತೀಯ ದಂಡ ಸಂಹಿತೆಯಡಿ ದಾಖಲಾಗುವ ಪ್ರಕರಣಗಳಿಗೆ ಪೂರ್ವಾನುಮತಿ ಬೇಕಾಗಿಲ್ಲ. ಹೀಗೆಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ತೆಲಂಗಾಣದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾ| ಬಿ.ಆರ್.ಗವಾಯಿ ಮತ್ತು ನ್ಯಾ| ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.
ಎ.ಶ್ರೀನಿವಾಸ ರೆಡ್ಡಿ ಎಂಬ ಬ್ಯಾಂಕ್ ಅಧಿ ಕಾರಿಯ ವಿರುದ್ಧ 22.50 ಕೋಟಿ ರೂ. ವಂ ಚನೆ ಆರೋಪ ಕೇಳಿಬಂದಿತ್ತು. ಆ ಅಧಿಕಾರಿ ವಿರುದ್ಧ ಭ್ರಷ್ಟಾ ಚಾರ ನಿಯಂತ್ರಣ ಕಾಯ್ದೆಯಡಿ ಕೇಸು ದಾಖ ಲಾಗಿತ್ತು. ಆದರೆ ಶ್ರೀನಿವಾಸ ರೆಡ್ಡಿ ಅವರು ಕ್ರಿಮಿನಲ್ ಪ್ರಕರಣ ರದ್ದು ಮಾಡುವಂತೆ ಹೈ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ಅದು ತಿರಸ್ಕೃತಗೊಂಡಿತ್ತು.
ಶ್ರೀನಿವಾಸ ರೆಡ್ಡಿ ಸರಕಾರಿ ಅಧಿಕಾರಿಯಾಗಿರುವ ಕಾರಣ ಆತನ ಮೇಲೆ ಕೇಳಿ ಬಂದಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿ ಯ ಅನುಮತಿ ಕಡ್ಡಾಯ ಎಂದಿತು.
ಭಾರತೀಯ ದಂಡ ಸಂಹಿತೆಯ ಅನ್ವಯ ದಾಖಲಾಗಿರುವ ಪ್ರಕರಣಗಳ ಬಗ್ಗೆ ಸ್ಥಳೀ ಯ ಕೋರ್ಟ್ ತೀರ್ಮಾನ ಕೈಗೊಳ್ಳಲಿದೆ. ಸದರಿ ಪ್ರಕರಣದಲ್ಲಿ ಅಧಿಕಾರಿ ತನ್ನ ಕರ್ತವ್ಯ ಪಾಲಿಸಿಲ್ಲ ಎಂಬ ಕಾರ ಣಕ್ಕಾಗಿ ಆತನ ವಿರುದ್ಧ ಕೇಸು ದಾಖಲಿಸಲು ಅನುಮತಿ ನೀಡಲಾದೆಯೋ ಇಲ್ಲವೋ ಎನ್ನುವುದನ್ನು ಮಾತ್ರ ನ್ಯಾಯಪೀಠ ಗಮನಿಸುತ್ತದೆ ಎಂದಿತು.