Advertisement

ಕಾಯ್ದೆ ಜಾರಿ ಬಳಿಕ ಅಪರಾಧ ಎಸಗದಿದ್ದರೆ ಬಂಧನ ಸರಿಯಲ್ಲ: ಸುಪ್ರೀಂ ಕೋರ್ಟ್‌

10:06 PM Dec 16, 2022 | Team Udayavani |

ನವದೆಹಲಿ: 2019ರಲ್ಲಿ ಗುಜರಾತ್‌ನಲ್ಲಿ ಭಯೋತ್ಪಾದಕ ನಿಗ್ರಹ ಕಾನೂನು ಜಾರಿಯಾದ ಬಳಿಕ ಒಬ್ಬ ವ್ಯಕ್ತಿಯು ಸಂಘಟಿತ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದಾದರೆ, ಅದಕ್ಕೂ ಮೊದಲು ಆತ ಮಾಡಿದ ಅಪರಾಧಗಳ ವಿಚಾರಣೆಯನ್ನು ಈ ಕಾಯ್ದೆಯಡಿ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಕಾಯ್ದೆಯು ಜಾರಿಯಾದ ಬಳಿಕ ಆತ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ನಡೆಸಿಲ್ಲ ಎಂದಾದರೆ, ಕಾಯ್ದೆ ಜಾರಿಯಾಗುವ ಮೊದಲು ಆತ ತಪ್ಪು ಮಾಡಿದ್ದರೂ, ಆ ಕಾಯ್ದೆಯಡಿ ಆತನನ್ನು ಬಂಧಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿದೆ.

ಜತೆಗೆ, 2015ರ “ಶಿವಾಜಿ ರಾಮಾಜಿ ಸೋನಾವಾನೆ ವರ್ಸಸ್‌ ಮಹಾರಾಷ್ಟ್ರ ಸರ್ಕಾರ’ ಪ್ರಕರಣದಲ್ಲೂ ಸರ್ವೋಚ್ಚ ನ್ಯಾಯಾಲಯ ಇದೇ ರೀತಿ ತೀರ್ಪು ನೀಡಿತ್ತು ಎಂದೂ ಪ್ರಸ್ತಾಪಿಸಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next