Advertisement

ಪೇಜಾವರಶ್ರೀ ಲಿಂಗಾಯತ ಹೇಳಿಕೆಗೆ ಸಹಮತ-ಯತ್ನಾಳ

05:41 PM Aug 06, 2019 | Team Udayavani |

ವಿಜಯಪುರ: ರಾಜಕಾರಣದಲ್ಲಿ ಧರ್ಮವಿರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ರಾಜರ ಕಾಲದಿಂದಲೂ ಧರ್ಮಗುರುಗಳು ರಾಜಕಾರಣಿಗಳಿಗೆ ಹಿತವಚನ ಹೇಳುವ ಪದ್ಧತಿ ನಮ್ಮಲ್ಲಿದೆ. ಲಿಂಗಾಯತ ಚರ್ಚಿತ ವಿಷಯದಲ್ಲೂ ಪೇಜಾವರ ಶ್ರೀಗಳು ಇದನ್ನೇ ಮಾಡಿದ್ದಾರೆ ಎಂದು ಪೇಜಾವರ ಶ್ರೀಗಳ ಹೇಳಿಕೆಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲ ವ್ತಕ್ತಪಡಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಯತ್ನಾಳ, ಪೇಜಾವರ ಶ್ರೀ ದೇಶದ ಶ್ರೇಷ್ಠ ಹಿಂದೂ ಸಂಸ್ಕೃತಿ ಗುರುಗಳು, ಧರ್ಮದ ಬಗ್ಗೆ ಚರ್ಚೆ ಮಾಡುವುದು ಸ್ವಾಮೀಗಳಿಗೆ ಬಿಟ್ಟಿದ್ದು ಎಂದರು.

ಎಲ್ಲವೂ ಒನ್ ಮ್ಯಾನ್ ಶೋ
ಮುಖ್ಯಮಂತ್ರಿಗಳು ಅಂದ್ರೆ ಬ್ರಹ್ಮ ಇದ್ದಂತೆ. ಅವರ ಕೆಳಗಡೆ ಎಲ್ಲ ಇಲಾಖೆಗಳು ಬರುತ್ತೇವೆ. ಸಿಎಂ ಯಡಿಯೂರಪ್ಪ ಎಲ್ಲವನ್ನೂ ನಿಭಾಯಿಸಲು ಸಮರ್ಥರಾಗಿದ್ದಾರೆ. ಅವರಿಗೆ ಯಾವ ಸಚಿವರು ಬೇಕಿಲ್ಲ ಎಂದು ಸಂಪುಟ ವಿಸ್ತರಣೆ ವಿಳಂಬವನ್ನು ಸಮರ್ಥಿಸಿದರು.

ಯಾರು ರಾಜಕೀಯ ಸಿದ್ಧಾಂತ ಹೇಳುವುದು ಬೇಡ. ಎಲ್ಲವೂ ಒನ್ ಮ್ಯಾನ್ ಶೋ ಇರುತ್ತದೆ. ಸಚಿವರಾಗಲು ಯಾವ ಶಾಸಕರಿಗೂ ಆತುರ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next