Advertisement

ಕನ್ನಡಪರ ಸಂಘಟನೆಗಳ ಬೆಂಬಲ ಹೊಸ ಮೆರುಗು

12:44 PM Dec 12, 2021 | Team Udayavani |

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್‌ನ ಆಶಯಗಳಿಗೆ ಬೆನ್ನೆಲುಬಾಗಿ ಕನ್ನಡಪರ ಸಂಘಟನೆಗಳು ನಿಲ್ಲುವುದಾಗಿ ಹೇಳುತ್ತಿರುವುದು ಕನ್ನಡ ಸೇವೆಗೆ ಹೊಸ ಮೆರುಗು ತಂದುಕೊಟ್ಟಿದೆ ಎಂದು ಕಸಾಪ ನೂತನ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್‌ ಅಳ್ಳುಂಡಿ ತಿಳಿಸಿದರು.

Advertisement

ನಗರದ ಕನ್ನಡ ಭವನದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನ್ನಡಪರ ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸುತ್ತಿರುವುದು ಬಹಳ ಖುಷಿ ಕೊಟ್ಟಿದೆ. ಇನ್ನು ಮುಂದೆ ಕಸಾಪ ಜನರ ಪರಿಷತ್‌ ಆಗಿ ಮುನ್ನಡೆಸುವ ಜವಾಬ್ದಾರಿ ನನ್ನದು. ಕಸಾಪ ರಾಜ್ಯಾಧ್ಯಕ್ಷರಾದ ಮಹೇಶ ಜೋಷಿ ರವಿವಾರ ನಗರಕ್ಕೆ ಆಗಮಿಸುವರು. ಅವರಿಗೆ ಆತ್ಮೀಯ ಅಭಿನಂದನೆ ಹಮ್ಮಿಕೊಳ್ಳಲಾಗಿದೆ ಎಂದರು.

ಒಕ್ಕೂಟದ ಮುಖಂಡ ಅಶೋಕ ಕುಮಾರ ಸಿ.ಕೆ. ಜೈನ ಮಾತನಾಡಿ, ಕನ್ನಡಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜೊತೆ ಸಕ್ರಿಯವಾಗಿ ಕೆಲಸ ಮಾಡಲಿವೆ. ಕಸಾಪ ಆಜೀವ ಸದಸ್ಯರಾಗಿ ಎಲ್ಲ ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೋಂದಣಿ ಮಾಡಲಾಗುವುದು. ರಾಯಚೂರು ನಗರದಲ್ಲಿಯೇ ಸದಸ್ಯತ್ವ ಸಂಖ್ಯೆ ಒಂದು ಸಾವಿರದ ಗಡಿ ದಾಟಬೇಕು ಎಂದು ಅಭಿಪ್ರಾಯಪಟ್ಟರು.

ಮುಖಂಡ ಡಾ| ಬಸವರಾಜ ಕಳಸ ಮಾತನಾಡಿ, ಕನ್ನಡಪರ ಸಂಘಟನೆಗಳು ಕಸಾಪದೊಂದಿಗೆ ಬೆರೆತು ಕನ್ನಡದ ಕೆಲಸ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು. ರಂಗಕರ್ಮಿ ವಿ.ಎನ್‌.ಅಕ್ಕಿ, ಜಿ.ಸುರೇಶ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವೀರ ಹನುಮಾನ್‌ ಮಾತನಾಡಿದರು. ಈ ವೇಳೆ ವಿವಿಧ ಕನ್ನಡಪರ ಸಂಘಟನೆಗಳ ಮುಂಡರಾದ ಎಸ್‌.ಶಿವಕುಮಾರ ಯಾದವ, ಅಸ್ಕಿಹಾಳ ಶರಣಪ್ಪ, ಡಿ.ವೀರೇಶಕುಮಾರ, ವೀರೇಶ ಹಿರಾ, ವೆಂಕಟೇಶ ಆರಗೊಲ, ವೆಂಕಟಗಿರಿ ಸಾಗರ, ಸಾದಿಕ್‌ ಖಾನ್‌, ಇಮ್ರಾನ್‌ ಬಡೇಸಾಬ್‌, ಮಹ್ಮದ್‌ ಶೇಖ್‌ ಹನಿಫ್‌, ಮಲ್ಲೇಶ ಗಧಾರ, ಪಿ.ಪ್ರಕಾಶ ವಕೀಲ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next