Advertisement

ಮಲ್ಲಿಕಾರ್ಜುನ ಖರ್ಗೆಗೆ ಬೆಂಬಲ: ಶಶಿ ತರೂರ್‌ ಅಸಮಾಧಾನ

12:21 AM Oct 16, 2022 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷೀಯ ಸ್ಥಾನದ ರೇಸ್‌ನಲ್ಲಿರುವ ಮಲ್ಲಿಕಾರ್ಜುನ ಖರ್ಗೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

“ಪಕ್ಷದ ಪದಾಧಿಕಾರಿಗಳು, ಸಿಎಂಗಳು, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಯಾವುದೇ ಅಭ್ಯರ್ಥಿಗೆ ಬೆಂಬಲಿಸದಿರಲು ಸೂಚಿಸ ಲಾಗಿದೆ. ಆದರೆ ಆಟದ ಮೈದಾನದಲ್ಲಿ ಸಮಾನತೆ ಇಲ್ಲ. ಹಲವರು ಖರ್ಗೆ ಅವರನ್ನು ಕರೆಸಿಕೊಂಡು ಸಭೆ ನಡೆಸುತ್ತಿದ್ದಾರೆ’ ಎಂದರು ತರೂರ್‌.

ಇದೇ ವೇಳೆ “ಚುನಾವಣೆಯಲ್ಲಿ ತರೂರ್‌ಗೆ ಬೆಲೆ ಯಿಲ್ಲ. ಗಾಂಧಿ ಕುಟುಂಬಕ್ಕೆ ಶೀಘ್ರವೇ ಮನಮೋಹನ್‌ ಸಿಂಗ್‌ 2.0 ಸಿಗಲಿದ್ದಾರೆ’ ಎಂದು ಟೀಕಿಸಿದ್ದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ವಿರುದ್ಧ ಕಿಡಿ ಕಾರಿರುವ ಶಶಿ, “ನಮ್ಮ ಆಂತರಿಕ ವಿಚಾರಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ನಮಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next