Advertisement

Delhi ನೀರು ಪೂರೈಸಿ: ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ಸೂಚನೆ

12:14 AM Jun 07, 2024 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಅಭಾವ ಉಂಟಾಗಿದ್ದು, ಸಮಸ್ಯೆಗೆ ಪರಿಹಾರವಾಗಿ ದಿಲ್ಲಿಗೆ ಹೆಚ್ಚುವರಿ ನೀರು ಪೂರೈಸುವಂತೆ ಹಿಮಾಚಲ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ. ನಿಮ್ಮಲ್ಲಿರುವ ಹೆಚ್ಚುವರಿ 137 ಕ್ಯುಸೆಕ್ಸ್‌ ನೀರನ್ನು ದಿಲ್ಲಿಗೆ ಪೂರೈಸಿ ಎಂದು ಹಿಮಾಚಲಕ್ಕೆ ಸೂಚಿಸಿರುವ ಕೋರ್ಟ್‌, ನೀರಿನ ಹರಿವಿಗೆ ಯಾವುದೇ ಅಡೆತಡೆ ಆಗದಂತೆ ನೋಡಿಕೊಳ್ಳಿ ಎಂದು ಹರ್ಯಾಣಕ್ಕೆ ನಿರ್ದೇಶನ ನೀಡಿದೆ.

Advertisement

ತೀರ್ಪಿನ ಬಳಿಕ ದೆಹಲಿ ಸಚಿವೆ ಆತಿಷಿ ಮಲೇìನಾ ಪ್ರತಿಕ್ರಿಯಿಸಿದ್ದು, ದೆಹಲಿ ಜನರ ನೀರಿನ ಹಕ್ಕಿಗೆ ಜಯವಾಗಿದೆ. ಸುಪ್ರೀಂಗೆ ಕೃತಜ್ಞತೆಗಳು ಎಂದು ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಚಿವೆ ಆತಿಷಿ, ಉತ್ತರ ಪ್ರದೇಶ, ಹರ್ಯಾಣ ಸಿಎಂಗಳಿಗೆ ಪತ್ರ ಬರೆದು ನವದಿಲ್ಲಿಗೆ ನೀರು ಒದಗಿಸುವಂತೆ ಕೋರಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next