Advertisement

Hunger Strike: ನೀರಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

04:27 PM Jun 21, 2024 | Team Udayavani |

ನವದೆಹಲಿ : ಒಂದೆಡೆ ಬಿಸಿಲಿನ ತಾಪ, ಇನ್ನೊಂದೆಡೆ ಕುಡಿಯುವ ನೀರಿನ ಹಾಹಾಕಾರ ಇವೆಲ್ಲದರ ನಡುವೆ ಹರಿಯಾಣದಿಂದ ಹೆಚ್ಚುವರಿ ನೀರು ಹರಿಸುವಂತೆ ಆಗ್ರಹಿಸಿ ದೆಹಲಿ ಸರ್ಕಾರದ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

Advertisement

ಈ ಕುರಿತು x ನಲ್ಲಿ ಪೋಸ್ಟ್ ಹಾಕಿರುವ ಸಚಿವೆ ದೆಹಲಿಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಇದರ ನಡುವೆ ಹರ್ಯಾಣ ಸರಕಾರ ನಮಗೆ ನೀಡಬೇಕಾದ ನೀರನ್ನು ನೀಡುತ್ತಿಲ್ಲ ಹಾಗಾಗಿ ಹರ್ಯಾಣ ಸರಕಾರ ನಮಗೆ ನಮ್ಮ ಪಾಲಿನ ನೀರನ್ನು ಕೊಡುವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಅಲ್ಲದೆ ಈ ಹಿಂದೆ ನೀರಿನ ಸಮಸ್ಯೆ ಬಂದಾಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಕದ ರಾಜ್ಯ ಹರ್ಯಾಣದಲ್ಲಿರುವ ಬಿಜೆಪಿ ಸರಕಾರದ ಬಳಿ ನೀರು ಬಿಡುವಂತೆ ಕೇಳಿಕೊಂಡಿದ್ದರು ಆದರೂ ಹರ್ಯಾಣ ಸರಕಾರ ನೀರಿನ ವಿಚಾರದಲ್ಲಿ ರಾಜಕೀಯ ಮಾಡಿಕೊಂಡು ಸಂಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡುವ ಮನಸ್ಸು ಮಾಡುತ್ತಿಲ ಎಂದು ದೂರಿದ್ದಾರೆ.

ಸತ್ಯಾಗ್ರಹ ನಡೆಸುತ್ತಿರುವ ಅತಿಶಿ ಅವರೊಂದಿಗೆ ಸುನಿತಾ ಕೇಜ್ರಿವಾಲ್, ಸಂಜಯ್ ಸಿಂಗ್ ಮತ್ತು ಇತರ ಪಕ್ಷದ ಶಾಸಕರು ಜೊತೆಗಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next