Advertisement

Ganesh Chaturthi ಹಬ್ಬಕ್ಕೆ ಕ್ರೈಸ್ತ ಬಾಂಧವರಿಂದ ತೆನೆ ಪೂರೈಕೆ

12:03 AM Sep 07, 2024 | Team Udayavani |

ಮಂಗಳೂರು: ಜಪ್ಪಿನಮೊಗರು ಕಡೆಕಾರಿನ ಹರ್ಬರ್ಟ್‌ ಡಿ’ಸೋಜಾ ಕಳೆದ ಹನ್ನೆರಡು ವರ್ಷಗಳಿಂದ ತಮ್ಮ ಗದ್ದೆಯಲ್ಲಿ ಭತ್ತ ಬೆಳೆಸಿ ಚೌತಿ ಹಬ್ಬಕ್ಕೆ ಉಚಿತವಾಗಿ ತೆನೆಯನ್ನು ವಿತರಿಸುತ್ತಿದ್ದಾರೆ. ಈ ಬಾರಿ ಸುಮಾರು 20ಕ್ಕೂ ಅಧಿಕ ದೇವಸ್ಥಾನಗಳಿಗೆ ತೆನೆ ಹಂಚುವ ಮೂಲಕ ಸೌಹಾರ್ದ ಮೆರೆದಿದ್ದಾರೆ.

Advertisement

ಕೆ‌ಥೋಲಿಕರ ತೆನೆ ಹಬ್ಬಕ್ಕೆ ಎಂದು ಭತ್ತದ ಕೃಷಿ ಮಾಡಿ ಇದರ ತೆನೆಯನ್ನು ಜಿಲ್ಲೆಯ ಬಹುತೇಕ ಚರ್ಚ್‌ಗಳಿಗೆ ನೀಡುವ ಕೆಲಸ ಮಾಡುತ್ತಿದ್ದು, ಇದರೊಂದಿಗೆ ಚೌತಿ ಹಬ್ಬಕ್ಕೂ ವಿವಿಧ ದೇವಾಲಯಗಳಿಗೆ ತೆನೆ ಹಂಚುತ್ತಿದ್ದಾರೆ.

ಈ ಬಾರಿ ಜಿಲ್ಲೆಯ 20ಕ್ಕೂ ಅಧಿಕ ದೇವಸ್ಥಾನಗಳಿಗೆ ಹರ್ಬಟ್‌ ತೆನೆ ಪೂರೈಸುತ್ತಿದ್ದಾರೆ. ವಿಶೇಷ ವೆಂದರೆ 40 ಸೆಂಟ್ಸ್‌ ಜಾಗದಲ್ಲಿ ಭತ್ತ ಬೆಳೆಸುವ ಇವರು ತಮ್ಮ ಗದ್ದೆಯಲ್ಲಿ ಬೆಳೆಸಿದ ಭತ್ತವನ್ನು ಎಂದಿಗೂ ಮನೆಗೆ ಕೊಂಡೊಯ್ದಿಲ್ಲ. ಬದಲಾಗಿ ದೇವಸ್ಥಾನ ಹಾಗೂ ಚರ್ಚ್‌ಗಳಿಗೆ ಹಂಚುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next