Advertisement

ಬಜೆಟ್‌ ರೈತರಿಗೆ ಪೂರಕ: ಸಿಎಂ

06:15 AM Jun 22, 2018 | Team Udayavani |

ರಾಮನಗರ: “ರೈತರಿಗೆ ಶಕ್ತಿ ತುಂಬುವ ಬಗ್ಗೆ ಹೊಸ ರೀತಿಯ ಆಲೋಚನೆಗಳು ತಮ್ಮಲ್ಲಿದ್ದು, ಜುಲೈ 5ರಂದು ತಾವು ಮಂಡಿಸುವ ಬಜೆಟ್‌ನಲ್ಲಿ ರೈತರಿಗೆ ಪೂರಕ ಅಂಶಗಳಿರಲಿವೆ’ ಎಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಪೇಟೆ ಕುರುಬರಹಳ್ಳಿಯಲ್ಲಿ ಉದ್ಬವ ಶ್ರೀ ಆಂಜನೇಯಸ್ವಾಮಿ ದೇವಾಲಯ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಘೋಷಿಸಲಾಗುವುದು ಎಂದರು.

“ಕಾವೇರಿ ನಿರ್ವಹಣಾ ಮಂಡಳಿಯ ಆದೇಶ ಬರುವವರೆಗೆ ಕಾಯಲು ಆಗುವುದಿಲ್ಲ. ಕಾವೇರಿ ಕಣಿವೆಯ ರೈತರಿಗೆ
ಅನುಕೂಲವಾಗು ವಂತೆ ಕೆರೆ, ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಕಾವೇರಿ ನದಿ ನೀರಿನ ವಿಚಾರ ವಾಗಿ ಯಾವುದೇ ಕಾನೂನು ಸಮಸ್ಯೆ ಬಂದರೂ ನಾನು ನೋಡಿ ಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನನಗೆ ರೈತರ ಹಿತ
ಮುಖ್ಯ’ ಎಂದರು.

ನ್ಯಾಯಾಲಯ ದಲ್ಲಿ ದೂರು ದಾಖಲಾದ ಮಾತ್ರಕ್ಕೆ ಡಿ.ಕೆ. ಶಿವಕುಮಾರ್‌ ಅವರ ರಾಜೀನಾಮೆ ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಕಾನೂನಿನ ಪ್ರಕಾರ ಅವರಿಗೆ ಹೋರಾಡುವ ಅವಕಾಶ ಇದೆ. ಅವರು ಹೋರಾಟ ಮಾಡುತ್ತಾರೆ.
–  ಎಚ್‌.ಡಿ.ಕುಮಾರಸ್ವಾಮಿ, ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next